ಸಂತೆಕಟ್ಟೆ ಮಾರುಕಟ್ಟೆ ಅವ್ಯವಸ್ಥೆ ಬಗ್ಗೆ ಜನಜಾಗೃತಿ ಸಭೆ
Update: 2016-05-23 18:50 GMT
ಉಡುಪಿ, ಮೇ 23: ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ಕಲ್ಯಾಣಪುರ ಸಂತೆಕಟ್ಟೆಯ ಮಾರುಕಟ್ಟೆ ಅವ್ಯವಸ್ಥೆ ಹಾಗೂ ಅಪಘಾತದ ಕುರಿತು ರವಿವಾರ ಜನಜಾಗೃತಿ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಸಂತೆಕಟ್ಟೆಯ ಮಾರುಕಟ್ಟೆ ಅವ್ಯವಸ್ಥೆಯನ್ನು ನಗರ ಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸರಿಪಡಿಸಬೇಕು. ಈ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದರು.
ವೇದಿಕೆಯ ಕಲ್ಯಾಣಪುರ ಘಟಕದ ಅಧ್ಯಕ್ಷ ಐವನ್ ರಿಚರ್ಡ್, ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರಾವ್ ಕಡಬ, ಸಂಘಟನಾ ಕಾರ್ಯದರ್ಶಿ ಆನಂದ ಅಮೀನ್ ಅಡ್ಯಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಝರುದ್ದೀನ್, ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸುರೇಂದ್ರ ನಿಟ್ಟೂರು, ಸುಭಾಶ್ ಸುದನ್, ಮುಮ್ತಾಝ್ ಅಲಿ, ಜುನೈದ್, ರಾಘು ಉಪ್ಪೂರು, ಸಂತೋಷ್ ಬ್ರಹ್ಮಾವರ, ಲೋಕಿ ಕೋಡಿ, ಅಶ್ಫಾಕ್ ಸಾಸ್ತಾನ ಮೊದಲಾದವರು ಉಪಸ್ಥಿತರಿದ್ದರು.