ಬಾಳಿಗ ಹತ್ಯೆ ಪ್ರಕರಣ: ಆರೋಪಿ ನರೇಶ್ ಶೆಣೈ ಪತ್ನಿಯಿಂದ ವಾಟ್ಸಪ್ ಗ್ರೂಪ್ ವಿರುದ್ಧ ದೂರು

Update: 2016-05-24 05:36 GMT

ಮಂಗಳೂರು, ಮೇ 24; ಆರ್ ಟಿಐ ಕಾರ್ಯಕರ್ತ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶಣೈ ಬಗ್ಗೆ ವಾಟ್ಸಪ್ ಗ್ರೂಪ್ ವೊಂದರಲ್ಲಿ ಅವಹೇಳನಕಾರಿ ಸಂದೇಶ ಬಂದಿದೆ ಎಂದು ಆರೋಪಿಸಿ ನರೇಶ್ ಶೆಣೈ ಪತ್ನಿ  ಸುಮನಾ ಶೆಣೈ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ದೇವಳದ ಭಕ್ತರು ಎಂಬ ಹೆಸರಿನಲ್ಲಿರುವ ಗ್ರೂಪ್ ನಲ್ಲಿ 41 ಸದಸ್ಯರಿದ್ದು  ಈ ಗ್ರೂಪ್ ನಲ್ಲಿ ಇತ್ತೀಚೆಗೆ ಒರ್ವ ಸದಸ್ಯ ನರೇಶ್ ಶೆಣೈ ಭಾವಚಿತ್ರ ಹಾಕಿ ಡೆಡ್ ಆರ್ ಅಲೈವ್ ನರೇಶ್ ಶೆಣೈ ವಾಂಟೆಡ್ ಎಂದು ಸಂದೇಶವನ್ನು ಹಾಕಿದ್ದರು.

ಈ ಸಂದೇಶವನ್ನು ಗ್ರೂಪ್ ನಲ್ಲಿದ್ದವರೊಬ್ಬರು ಸುಮನಾ ಶೆಣೈಗೆ ನೀಡಿದ್ದಾರೆ. ಇದರ ಆಧಾರದ ಮೇಲೆ ಸುಮನಾ ಶೆಣೈ 41 ಸದಸ್ಯರ ಗ್ರೂಪ್ ವಿರುದ್ಧ 2ನೇ ಜೆಎಂ ಎಫ್ ಸಿ ಕೋರ್ಟಿನಲ್ಲಿ ದಾವೆಯನ್ನು ಹೂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News