ಕೇರಳ: ಸರಕಾರ ರಚನೆಗೆ ಪಿಣರಾಯಿಗೆ ರಾಜ್ಯಪಾಲರಿಂದ ಆಹ್ವಾನ

Update: 2016-05-24 07:02 GMT

ತಿರುವನಂತಪುರಂ,ಮೇ 24: ಸರಕಾರ ರಚಿಸಲು ಸಿಪಿಎಂ ಶಾಸಕಾಂಗ ಪಕ್ಷದ ನಾಯಕ ಪಿಣರಾಯಿ ವಿಜಯನ್‌ರಿಗೆ ಕೇರಳ ರಾಜ್ಯಪಾಲರು ಅಧಿಕೃತ ಆಹ್ವಾನ ನೀಡಿದ್ದಾರೆ. ಸರಕಾರ ರಚಿಸುತ್ತೇವೆಂದು ಎಲ್‌ಡಿಎಫ್ ನಾಯಕರು ಭೇಟಿಯಾದ ಬೆನ್ನಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ಮಾತ್ರವಲ್ಲ ಸಚಿವರ ಪಟ್ಟಿಯನ್ನು ನೀಡಬೇಕೆಂದು ರಾಜ್ಯಪಾಲರು ಪಿಣರಾಯಿಗೆ ಸೂಚಿಸಿದ್ದಾರೆ.

ಸಿಪಿಎಂ ಶಾಸಕಾಂಗ ಪಕ್ಷದ ನಾಯಕರಾಗಿ ಪಿಣರಾಯಿ ವಿಜಯನ್‌ರನ್ನು ಆಯ್ಕೆ ಮಾಡಿರುವ ಪತ್ರವನ್ನು ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ರಾಜ್ಯಪಾಲರಿಗೆ ನೀಡಿದ್ದರು. ಈ ಸಂದರ್ಭದಲ್ಲಿ ಸಿಪಿಐ ನಾಯಕ ಇ. ಚಂದ್ರಶೇಖರ್, ಎನ್ಸಿಪಿ ನಾಯಕ ಎಕೆ ಶಶೀಂದ್ರನ್ ಕೊಡಿಯೇರಿ ಜೊತೆಗಿದ್ದರು. ಬುಧವಾರ ಬೆಳಗ್ಗೆ 9:30ಕ್ಕೆ ನಿಯೋಜಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಸಚಿವರ ಖಾತೆಗಳನ್ನು ಪ್ರಮಾಣವಚನದ ಬಳಿಕ ತಿಳಿಸಲಾಗುವುದು ಎಂದು ಕೊಡಿಯೇರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News