ನಮ್ಮದು ಜನರ ಸರಕಾರ: ಪಿಣರಾಯಿ ವಿಜಯನ್

Update: 2016-05-24 07:09 GMT

ತಿರುವನಂತಪುರಂ, ಮೇ 24: ಕೇರಳದಲ್ಲಿ ನಾಳೆ ಪ್ರಮಾಣವಚನ ಸ್ವೀಕರಿಸಲಿರುವುದು ಜನರ ಸರಕಾರವಾಗಿದೆ ಎಂದು ನಿಯೋಜಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸರಕಾರ ಪಕ್ಷತಾರತಮ್ಯ ಮಾಡುವುದಿಲ್ಲ. ಜಾತಿ, ಧರ್ಮ ಅತೀತವಾದ ಸರಕಾರ ರಚಿಸಲಾಗುವುದು. ಜನರ ಒಳಿತಿಗೂ ನಾಡಿನ ಒಗ್ಗಟ್ಟಿಗೂ ಕೆಲಸ ಮಾಡುವೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. ಜನರಿಗೆ ಬೆನ್ನು ಹಾಕಿ ನಿಂತರೆ ಪ್ರಜಾಪ್ರಭುತ್ವ ಪ್ರಕ್ರಿಯೆ ಪೂರ್ತಿಯಾಗುವುದಿಲ್ಲ ಎಂದೂ ಅವರು ಹೇಳಿದರು.

ಸಾಂಸ್ಕೃತಿಕ ನಾಯಕರು, ಧಾರ್ಮಿಕ ಮುಖಂಡರು, ಹುತಾತ್ಮರ ಕುಟುಂಬಗಳು, ಸಮಾಜದ ವಿವಿಧ ವಲಯಗಳ ಉನ್ನತರು ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಗೆಲುವಿಗಾಗಿ ರಾತ್ರಿ ಹಗಲು ದುಡಿದವರಿಗೆ ಕೃತಜ್ಞತೆ ಯನ್ನೂ ಸಲ್ಲಿಸಿದರು. ಬುಧವಾರ ನಡೆಯಲಿರುವ ಪ್ರಮಾಣವಚನ ಸಮಾರಂಭದ ವಿವರಗಳನ್ನು ತಿಳಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಪಿಣರಾಯಿ ವಿಜಯನ್ ಮಾತಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News