ಪ್ರಯಾಗರಾಜ್ ಎಕ್ಸ್​ಪ್ರೆಸ್ ರೈಲಿನಲ್ಲಿ ದರೋಡೆ

Update: 2016-05-24 07:29 GMT

ಗಾಝಿಯಾಬಾದ್, ಮೇ 24: ಅಲಬಾಹಾದ್​ನಿಂದ ಹೊಸದಿಲ್ಲಿಗೆ ಹೊರಟಿದ್ದ ಪ್ರಯಾಗರಾಜ್ ಎಕ್ಸ್​ಪ್ರೆಸ್ ರೈಲಿನಲ್ಲಿ ದುರ್ಷ್ಕರ್ಮಿಗಳು  ಬಂದೂಕು ತೋರಿಸಿ 12 ಪ್ರಯಾಣಿಕರಿಂದ ಭಾರಿ ಮೊತ್ತದ ನಗ-ನಗದು ಕಳವು ಮಾಡಿದ್ದಾರೆ
ಇಂದು ಬೆಳಗ್ಗಿನ ಜಾವ ಅಲಿಘರ್​ನಲ್ಲಿ ರೈಲು ಬೋಗಿಗೆ ಹತ್ತಿದ ದುಷ್ಕರ್ವಿುಗಳು  ರೈಲು ಖುರ್ಜಾ ನಿಲ್ದಾಣ ತಲುಪುತ್ತಿದ್ದಂತೆ ಮಲಗಿದ್ದ ಯಾತ್ರಿಕರಿಗೆ ಬಂದೂಕು ತೋರಿಸಿ ಜೀವ ಬೆದರಿಕೆಯೊಡ್ಡಿ ಅವರ ಬಳಿಯಿದ್ದ ನಗದು, ಚಿನ್ನಾಭರಣಗಳನ್ನು ದೋಚಿದ್ದಾರೆ.
 ಗಾಝಿಯಾಬಾದ್ ನಿಲ್ದಾಣ ಬರುತ್ತಿದ್ದಂತೆ ಪ್ರಯಾಣಿಕರು    7 ಮಂದಿ ದುಷ್ಕರ್ವಿುಗಳು ತಮಗೆ ಜೀವಬೆದರಿಕೆಯೊಡ್ಡಿ ಚಿನ್ನಾಭರಣ ದೋಚಿದರು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದರು.
ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News