ಮಂಗಳೂರು ಎಪಿಎಂಸಿ ವಾರ್ಡ್‌ ಅಭಿವೃದ್ಧಿಗೆ ಕ್ರಮ: ಸಚಿವ ರೈ

Update: 2016-05-24 18:31 GMT

ಮಂಗಳೂರು, ಮೇ 24: ಬೈಕಂಪಾಡಿ ಎಪಿಎಂಸಿಯ ಸ್ಥಳದಲ್ಲಿ ನಗರದ ಹಳೆ ಬಂದರಿನ ಎಲ್ಲ ವ್ಯಾಪಾರಿಗಳು ವ್ಯಾಪಾರ ನಡೆಸುವುದಾದರೆ ಸರಕಾರ ಎಪಿಎಂಸಿಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
  
ಎಪಿಎಂಸಿ ಸಭಾಂಗಣದಲ್ಲಿ ಇಂದು ಎಪಿಎಂಸಿ ಅಭಿವೃದ್ಧಿ ಕುರಿತ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು. ಮಂಗಳೂರು ಕೃಷಿ ಉತ್ಪನ್ನ ಕೇಂದ್ರ(ಎಪಿಎಂಸಿ) ವಿವಿಧ ಕಾರಣಗಳಿಂದ ಬೆಳೆದಿಲ್ಲ. ಇದರ ಸಮಗ್ರ ಅಭಿವೃದ್ಧಿಗಾಗಿ ಪುನಶ್ಚೇತನಗೊಳಿಸಿ ಕಾರ್ಯರೂಪಕ್ಕೆ ಬರುವಂತಾಗಬೇಕಿದೆ. 80 ಎಕರೆಯಷ್ಟು ಸ್ಥಳವಿದ್ದರೂ ಉಪಯೋಗಕ್ಕೆ ಬಾರದಂತಹ ಸ್ಥಿತಿ ಎಪಿಎಂಸಿಯದ್ದಾಗಿದೆ. ಬಂದರಿನ ಎಪಿಎಂಸಿ ಸಬ್‌ಯಾರ್ಡ್‌ನಿಂದ ವರ್ತಕರನ್ನು ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರಿಸುವ ಬಗ್ಗೆ ಚರ್ಚಿಸಿ ಸಾಧಕ- ಬಾಧಕಗಳನ್ನು ವಿಮರ್ಶೆ ಮಾಡಿದ ಬಳಿಕ ನಿರ್ಣಯ ಕೈಗೊಳ್ಳಬೇಕು. ಈ ಹಿಂದೆ ಎಪಿಎಂಸಿ ಕೇಂದ್ರವು ಅಭಿವೃದ್ಧಿಯಾಗಬೇಕೆಂಬ ಯಾವುದೇ ಪ್ರಸ್ತಾವನೆಯಿಲ್ಲದೆ, ಯಥಾಸ್ಥಿತಿಯಲ್ಲಿ ಇಲ್ಲಿಯವರೆಗೆ ನಡೆದುಕೊಂಡು ಬಂದಿದೆ. ಅಭಿವೃದ್ಧಿಯ ದೃಷ್ಟಿಕೋನ ಹೊಂದಿರದೆ ವ್ಯಾಪಾರ ನಡೆಯಬೇಕೆಂದು ಯಾರೂ ಯೋಚನೆ ಮಾಡದಿರುವುದು ವಿಪರ್ಯಾಸ ಎಂದು ಹೇಳಿದರು.
ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಬಂದರು ಎಪಿಎಂಸಿ ಸಬ್‌ಯಾರ್ಡ್‌ನಿಂದ ಬೈಕಂಪಾಡಿಗೆ ವರ್ತಕರು ಸ್ಥಳಾಂತರಗೊಂಡರೆ ಬಂದರು ರಸ್ತೆ, ಬೀಬಿ ಅಲಾಬಿ ರಸ್ತೆ ಹಾಗೂ ಕಾಳಿಕಾಂಬ ದೇವಸ್ಥಾನ ರಸ್ತೆ ನಗರದ ಮುಖ್ಯ ರಸ್ತೆಗಳಂತಾಗುತ್ತದಲ್ಲದೆ, ಈ ಪ್ರದೇಶಗಳು ಸಮಗ್ರ ಅಭಿವೃದ್ಧಿಯಾಗುತ್ತವೆ. ಎರಡೆರಡು ಕಡೆಗಳಲ್ಲಿ ಎಪಿಎಂಸಿಗಳಿರುವುದರಿಂದ ಸಮಸ್ಯೆಗಳಾಗುತ್ತವೆ. ಹಳೆ ಬಂದರು ಪ್ರದೇಶದಲ್ಲಿ ಘನ ವಾಹನಗಳ ಸಾಗಾಟದಿಂದ ಇತರ ವಾಹನಗಳು ಸಾಗಲು ಸಮಸ್ಯೆಗಳಾಗುತ್ತವೆ. ಎಲ್ಲ ವರ್ತಕರನ್ನು ಬೈಕಂಪಾಡಿ ಎಪಿಎಂಸಿಗೆ ಸ್ಥಳಾತರಿಸಿದಲ್ಲಿ ರಸ್ತೆ ಸಂಚಾರ ಸಮಸ್ಯೆ ಪರಿಹಾರವಾಗುವುದಲ್ಲದೆ, ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.


ಸಭೆಯಲ್ಲಿ ಸಚಿವ ಕೆ. ಅಭಯಚಂದ್ರ ಜೈನ್, ಶಾಸಕ ಮೊಯ್ದಿನ್ ಬಾವಾ, ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ, ಹೆಚ್ಚುವರಿ ಆಯುಕ್ತ ಗೋಕುಲದಾಸ್ ನಾಯಕ್, ಮಂಗಳೂರು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಜಿ. ವಿಶ್ವನಾಥ್ ಕಾಮತ್, ಎಸಿಪಿ ಉದಯನಾಯಕ್, ದೇವರಾಜ್ ಅರಸ್ ಟ್ರಕ್ ಟರ್ಮಿನಲ್‌ನ ಎಂ.ಡಿ. ಮಲ್ಲಿಕಾರ್ಜುನ, ಕೆಸಿಸಿಐ ಆಧ್ಯಕ್ಷ ರಾಮ್ ಮೋಹನ ಪೈ ಮಾರೂರು ಮತ್ತಿತರರು ಉಪಸ್ಥಿತರಿದ್ದರು.ದ.ಕ. ಮುಸ್ಲಿಮ್ ಅಸೋಸಿಯೇಶನ್‌ನಿಂದ ಸೈಫ್ವಾನ್ ಕುಟುಂಬಕ್ಕೆ ಸಹಾಯಧನ ವಿತರಣೆಮಂಗಳೂರು, ಮೇ 24: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಚೆಂಬುಗುಡ್ಡೆಯ ಸೈಫ್ವಾನ್ ಕುಟುಂಬಕ್ಕೆ ದ.ಕ. ಮುಸ್ಲಿಮ್ ಅಸೋಸಿಯೇಶನ್ ವತಿಯಿಂದ 2 ಲಕ್ಷ ರೂ. ಸಹಾಯಧನವನ್ನು ಮಂಗಳವಾರ ವಿತರಿಸಲಾಯಿತು.


ದ.ಕ. ಮುಸ್ಲಿಮ್ ಅಸೋಸಿಯೇಶನ್‌ನ ಸ್ಥಾಪಕಾಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಗ್ರೂಪ್ 4 ಕೋಶಾಧಿಕಾರಿ ಬಿ.ಎಸ್ ಬಶೀರ್, ಸಂಘಟನಾ ಕಾರ್ಯದರ್ಶಿ ಎಸ್.ಎಂ ಫಾರೂಕ್ ಮತ್ತು ಜೊತೆ ಕಾರ್ಯದರ್ಶಿ ರಫೀಕ್ ಮಾಸ್ಟರ್‌ರಿದ್ದ ತಂಡ ಸೈಫ್ವಾನ್‌ರ ಮನೆಗೆ ಭೇಟಿ ನೀಡಿ ಸಹಾಯಧನ ವಿತರಿಸಿತು. ದ.ಕ. ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಮ್ ಕುಟುಂಬಗಳ ಯಜಮಾನ ಅಥವಾ ದುಡಿಯುವ ವ್ಯಕ್ತಿಗಳು ಮೃತಪಟ್ಟ ಸಂದರ್ಭ ಆ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ದ.ಕ. ಮುಸ್ಲಿಮ್ ಅಸೋಸಿಯೇಶನ್ ಸ್ಫಾಪಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭದಲ್ಲಿ ಘೋಷಿಸಿರುವಂತೆ ಸೈಫ್ವಾನ್ ಕುಟುಂಬಕ್ಕೆ 2 ಲಕ್ಷ ರೂ. ಸಹಾಯಧನವನ್ನು ವಿತರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News