ರವೀಶ ತಂತ್ರಿಗೆ ದೇವಳದಿಂದ ನೋಟಿಸ್

Update: 2016-05-24 18:36 GMT

ಪುತ್ತೂರು, ಮೇ 24 ಕೇರಳ ವಿಧಾನಸಭಾ ಚುನಾವಣೆಗೆ ಕಾಸರಗೋಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ತಂತ್ರಿ ಹಾಗೂ ಸೀಮೆಯ ಧಾರ್ಮಿಕ ಮಾರ್ಗದರ್ಶಕ ಕುಂಟಾರು ರವೀಶ ತಂತ್ರಿಗೆ ಮಹಾಲಿಂಗೇಶ್ವರ ದೇವಳದ ಆಡಳಿತಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ರವೀಶ್‌ರನ್ನು ತಂತ್ರಿ ಸ್ಥಾನದಿಂದ ಯಾಕೆ ಬದಲಾಯಿಸಬಾರದು? ಎಂದು ಕಾರಣ ಕೇಳಿ ಸೋಮವಾರ ನೋಟಿಸ್ ನೀಡಲಾಗಿದ್ದು, 10 ದಿನಗಳೊಳಗೆ ಇದಕ್ಕೆ ಉತ್ತರಿಸುವಂತೆ ಸೂಚಿಸಲಾಗಿದೆ. ನೋಟಿಸ್ ಕುರಿತಂತೆ ಪ್ರತಿಕ್ರಿಯಿಸಿ ರುವ ಕುಂಟಾರು ರವೀಶ ತಂತ್ರಿ, ಧಾರ್ಮಿಕಮತ್ತು ಕಾನೂನಿನ ಇತಿಮಿತಿಯೊಳಗೆ ಪರಿಶೀಲನೆ ಮಾಡಿ ನೋಟಿಸ್‌ಗೆ ಉತ್ತರಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News