ಜೂ. 3: ಸಮಸ್ತ ಸಾರಥಿಗಳಿಗೆ ಸನ್ಮಾನ ಕಾರ್ಯಕ್ರಮ

Update: 2016-05-28 06:25 GMT

ಮಂಗಳೂರು, ಮೇ 28: ಧಾರ್ಮಿಕ ರಂಗದಲ್ಲಿ ಸಮಸ್ತದ ಸೇವೆಗಾಗಿ ಕಾರ್ಯಾಚರಿಸುತ್ತಾ ಎಲ್ಲರ ಮೆಚ್ಚುಗೆಯನ್ನು ಗಳಿಸಿದ ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಮಂಗಳೂರು ಇದರ ವತಿಯಿಂದ ಸುನ್ನೀ ಸಂದೇಶ 14ನೇ ಸಂಭ್ರಮದ ಪ್ರಯುಕ್ತ  ಜೂನ್ 3 ರಂದು ಮಧ್ಯಾಹ್ನ 3.30ಕ್ಕೆ ಮಂಗಳೂರಿನ ಪುರಭವನದಲ್ಲಿ ರಂಝಾನ್ ಕರೆಯುತ್ತಿದೆ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಸಮಸ್ತ ಅಧ್ಯಕ್ಷರಾಗಿದ್ದ ಕೋಯಕುಟ್ಟಿ ಉಸ್ತಾದ್ ಹಾಗೂ ಕಾರ್ಯದರ್ಶಿಯಾಗಿದ್ದ ಝೈನುಲ್ ಉಲಮಾ ಉಸ್ತಾದ್‍ರವರ ಅನುಸ್ಮರಣಾ ಕಾರ್ಯಕ್ರಮ ಹಾಗೂ ಸಮಸ್ತ ಸಾರಥಿಗಳಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.

ಕಾರ್ಯಕ್ರಮದಲ್ಲಿ ಶೈಖುನಾ ಖಾಝಿ ತ್ವಾಖಾ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭವನ್ನು ಜಬ್ಬಾರ್ ಉಸ್ತಾದ್ ಉದ್ಘಾಟಿಸಲಿದ್ದಾರೆ. ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ದುವಾ ಆಶೀರ್ವಚನ ನೀಡಲಿದ್ದಾರೆ. ಆಲಿಕುಟ್ಟಿ ಉಸ್ತಾದ್, ಎಂ.ಟಿ ಉಸ್ತಾದ್, ಕೊಯ್ಯೋಡು ಉಸ್ತಾದ್, ಖಾಸಿಂ ಉಸ್ತಾದ್, ಎಸ್.ಕೆ.ಎಸ್.ಎಸ್.ಎಫ್. ಕೇಂದ್ರೀಯ ಅಧ್ಯಕ್ಷ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಬಂಬ್ರಾಣ ಉಸ್ತಾದ್ ಮೊದಲಾದ ಗಣ್ಯ ವ್ಯಕ್ತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಿದ್ದೇವೆ.

ರಂಝಾನ್ ಕರೆಯುತ್ತಿದೆ ಎಂಬ ವಿಷಯದಲ್ಲಿ ಖುರ್‍ಆನ್ ವಿದ್ವಾಂಸ ಸಿಂಸಾರುಲ್ ಹಖ್ ಹುದವಿ ಅಬುದಾಬಿ ಹಾಗೂ ಸಮಸ್ತದ ಮಹೋನ್ನತ ನಾಯಕ ಎಂಬ ವಿಷಯದಲ್ಲಿ ಹಾಜಿ ಅಬ್ದುಸ್ಸಮದ್ ಪೂಕೋಟೂರ್ ಮುಖ್ಯ ಭಾಷಣ ಮಾಡಲಿದ್ದಾರೆ.

ಸಮಾರಂಭದಲ್ಲಿ ಶಾಸಕರಾದ ಮಣ್ಣಾರ್‍ಕಾಡ್ ಎಂ.ಎಲ್.ಎ. ಅಡ್ವ. ಶಂಸುದ್ದೀನ್, ಎನ್.ಎ. ನೆಲ್ಲಿಕುನ್ನು ಕಾಸರಗೋಡು, ಅಬ್ದುರ್ರಝಾಕ್ ಮಂಜೇಶ್ವರ, ಸಚಿವ ಯು.ಟಿ. ಖಾದರ್, ಮದ್ರಸ ಶಿಕ್ಷಣ ಮಂಡಳಿಯ ಕೇಂದ್ರೀಯ ಸದಸ್ಯರಾದ ಕೆ.ಯಸ್. ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಅಬೂಬಕರ್ ಹಾಜಿ ಗೋಳ್ತಮಜಲು, ದ.ಕ. ಜಿಲ್ಲಾ ಮದ್ರಸ ಮೆನೇಜ್‍ಮೆಂಟ್ ಅಧ್ಯಕ್ಷರಾದ ಐ.ಮೊದಿನಬ್ಬ ಹಾಜಿ ಮಂಗಳೂರು, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಮಸೂದ್ ಹಾಜಿ, ಯೆನೆಪೋಯ ವಿದ್ಯೆ ಸಂಸ್ಥೇಯ ಕುಲಪತಿ ವೈ ಅಬ್ದುಲ್ಲ ಕುಂಞ ಹಾಜಿ, ವೈ ಮುಹಮ್ಮದ್ ಕುಂಙ ಹಾಜಿ, ನಗರಾಭಿವೃದ್ದಿ ಅದ್ಯಕ್ಷ ಇಬ್ರಾಹಿಂ ಹಾಜಿ ಕೊಡಿಜಾಳ್, ಉಳ್ಳಾಲ ಸೆಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ರಶೀದ್ ಹಾಜಿ, ಜಿಲ್ಲಾ ವಕ್ಫ್ ಸಮಿತಿಯ ಅಧ್ಯಕ್ಷ ಎಸ್.ಯಂ. ರಶೀದ್ ಹಾಜಿ ಮಂಗಳೂರು, ಮೆಟ್ರೋ ಹಾಜಿ ಗುರುಪುರ, ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ, ಆಸ್ಕೋ ಹಾಜಿ ಮೂಡಬಿದ್ರೆ, ಹಮೀದ್ ಹಾಜಿ ಕಲ್ಲಡ್ಕ, ಶರೀಫ್ ಫೈಝಿ ಕಡಬ, ನೌಸಾದ್ ಹಾಜಿ ಸೂರಲ್ಪಾಡಿ ಮೊದಲಾದ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಸುನ್ನೀ ಸಂದೇಶ ಪ್ರಧಾನ ಸಂಪಾದಕರಾದ ಹಾಜಿ ಕೆ.ಯಸ್. ಹೈದರ್ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ., ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ಸುನ್ನೀ ಸಂದೇಶ ನಡೆದು ಬಂದ ದಾರಿ ಎಂಬ ವಿಷಯದಲ್ಲಿಯೂ, ಕೆ.ಯಲ್. ಉಮರ್ ದಾರಿಮಿ 14 ವರ್ಷಗಳಿಂದ ಸುನ್ನೀ ಸಂದೇಶದ ಸೇವೆ ಎಂಬ ವಿಷಯದಲ್ಲಿಯೂ, ಸೀತಾರ್ ಮಜೀದ್ ಹಾಜಿ ಸುನ್ನೀ ಸಂದೇಸದ ಮುಂದಿನ ಗುರಿ ಎಂಬ ವಿಷಯದಲ್ಲಿಯೂ ಬಾಷಣ  ಮಾಡಲಿದ್ದಾರೆ ಎಂದು ಮುಸ್ತಫ ಫೈಝಿ ಕಿನ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News