6 ಬಂಡಾಯ ಕಾಂಗ್ರೆಸ್ ಶಾಸಕರು ಟಿಎಂಸಿಗೆ

Update: 2016-06-04 18:25 GMT

ಕೋಲ್ಕತಾ, ಜೂ.4: ತ್ರಿಪುರದ ಮಾಜಿ ಮುಖ್ಯಮಂತ್ರಿ ಸಮೀರ್ ರಂಜನ್ ಬರ್ಮನ್ ಹಾಗೂ ಅವರ ಪುತ್ರ ಸುದೀಪ್ ಸೇರಿದಂತೆ ಆರು ಮಂದಿ ಬಂಡುಕೋರ ಕಾಂಗ್ರೆಸ್ ಶಾಸಕರು, ಮುಂದಿನ ತಿಂಗಳು ತೃಣಮೂಲ ಕಾಂಗ್ರೆಸ್(ಟಿಎಂಸಿ)ಗೆ ಸೇರ್ಪಡೆಗೊಳ್ಳಲಿದ್ದಾರೆ. ಸುದೀಪ್ ರಾಯ್ ಅವರು ಕೋಲ್ಕತಾದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

‘‘ಮಮತಾ ಬ್ಯಾನರ್ಜಿ ನಾಯಕತ್ವದಲ್ಲಿ ನಾವು ತ್ರಿಪುರದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಬಯಸಿದ್ದೇವೆ. ಪಶ್ಚಿಮಬಂಗಾಳದಲ್ಲಿ ಸಿಪಿಎಂ ಜೊತೆ ಚುನಾವಣಾಮೈತ್ರಿ ಏರ್ಪಡಿಸಿಕೊಂಡ ಬಳಿಕ ತ್ರಿಪುರದಲ್ಲಿ ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News