×
Ad

ಒಬ್ಬ ಆರೋಪಿ ವಿಹಿಂಪ ಪಂಜಾಬ್ ಕಾರ್ಯದರ್ಶಿ

Update: 2016-07-01 00:05 IST

  ಪಟಿಯಾಲ, ಜೂ.30: ಜೂನ್ 24 ರಂದು ಹಿಂಸೆಗೆ ಕಾರಣವಾದ ಮಲೇರ್ಕೋಟ್ಲಾದಲ್ಲಿ ಕುರ್‌ಆನ್‌ಗೆ ಬೆಂಕಿಯಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದ ಮೂರು ಮಂದಿಯಲ್ಲಿ ಒಬ್ಬ ವಿಶ್ವ ಹಿಂದೂ ಪರಿಷದ್ ಸಂಘಟನೆಯ ಪಂಜಾಬ್ ಘಟಕದ ಕಾರ್ಯದರ್ಶಿಯಾಗಿದ್ದು ಆತನ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆಯೆಂದು ಸಂಘಟನೆ ಆರೋಪಿಸಿದೆ.
ಆದರೆ ಬಂಧಿತ ಮೂವರು ಯಾವುದೇ ಸಂಘಟನೆಗಳಿಗೆ ಸೇರಿದವರಲ್ಲವೆಂದು ಹಾಗೂ ಮುಸ್ಲಿಮರ ಮತ್ತು ಪಾಕಿಸ್ತಾನ ವಿರುದ್ಧದ ದ್ವೇಷದಿಂದ ಪಂಜಾಬ್‌ನ ಒಂದೇ ಒಂದು ಮುಸ್ಲಿಮ್ ಬಾಹುಳ್ಯದ ಪಟ್ಟಣದಲ್ಲಿ ಹಿಂಸೆ ನಡೆಸುವ ಉದ್ದೇಶ ಹೊಂದಿದ್ದರೆಂದು ಪೊಲೀಸರು ಹೇಳಿದ್ದಾರೆ.
  

 
ಬಂಧಿತ ನಂದ್ ಕಿಶೋರ್ ‘ಗೋಲ್ಡಿ’ ವಿಹಿಂಪ ಪದಾಧಿಕಾರಿಯೆಂದು ಹೇಳಲಾಗಿದೆ. ಆತನ ಪುತ್ರ ಗೌರವ್ ಹಾಗೂ ದಿಲ್ಲಿ ಉದ್ಯಮಿ ಮತ್ತು ಈ ಪ್ರಕರಣದ ಪ್ರಮುಖ ರೂವಾರಿ ವಿಜಯ್ ಕುಮಾರ್ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ವಿಹಿಂಪ ದ ರಾಜ್ಯ ಉಪಾಧ್ಯಕ್ಷ ದೇವೀಂದರ್‌ಕುಮಾರ್ ಮತ್ತಿತರ ಪದಾಧಿಕಾರಿಗಳು ಹೇಳುವಂತೆ ಗೋಲ್ಡಿ ಯಾವುದೇ ತಪ್ಪು ಮಾಡಿಲ್ಲವಾಗಿದ್ದು ಪೊಲೀಸರು ಆತನನ್ನು ಪಠಾಣ್‌ಕೋಟ್‌ನಲ್ಲಿರುವ ಬೆಗೋವಾಲ ಗ್ರಾಮದ ಆತನ ನಿವಾಸದಿಂದ ಬಂಧಿಸಿದ್ದರೂ ಆತನನ್ನು ಪಟಿಯಾಲ ಸನೌರ್‌ನಲ್ಲಿ ಬಂಧಿಸಿದ್ದಾರೆಂದು ಹೇಳಿರುವುದು ಸುಳ್ಳು. ಆತ ಮಲೇರ್ಕೋಟ್ಲಾಗೆ ಭೇಟಿ ನೀಡಲೇ ಇಲ್ಲವೆಂದು ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News