ಲಾಭದಾಯಕವಾಗಲು ಯಾಂತ್ರೀಕೃತ ಕೃಷಿ ಮಾಡಿ:ಕೃಷ್ಣ ಬೈರೇಗೌಡ

Update: 2016-07-10 15:02 GMT

 ಬ್ರಹ್ಮಾವರ, ಜು.10: ವಿವಿಧ ಕಾರಣಗಳಿಗಾಗಿ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಪ್ರಮುಖ ಆಹಾರ ಬೆಳೆಯಾದ ಭತ್ತದ ಕೃತಿ ನಶಿಸುತಿದ್ದು, ಭತ್ತದ ಕೃಷಿಯನ್ನು ಲಾಭದಾಯವಾಗಿಸಲು ಯಾಂತ್ರೀಕೃತ ಕೃಷಿಗೆ ಹೆಚ್ಚಿನ ಒತ್ತು ನೀಡಿ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಈ ಭಾಗದ ಕೃಷಿಕರಿಗೆ ಕರೆ ನೀಡಿದ್ದಾರೆ.

ಇಲ್ಲಿಗೆ ಸಮೀಪದ ಚಾಂತಾರು ಅಗ್ರಹಾರ ಗುಚ್ಛ ಗ್ರಾಮದಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ, ಕೃಷಿ ಇಲಾಖೆ ಉಡುಪಿ ಜಿಲ್ಲೆ, ಅಗ್ರಹಾರದ ವಿವಿಧ ಸಂಘಸಂಸ್ಥೆಗಳು, ಕೃಷಿ ಯಂತ್ರಧಾರೆ ಕೇಂದ್ರಗಳ ಸಹಯೋಗದಲ್ಲಿ ಆಯೋಜಿಸಲಾದ ಯಾಂತ್ರೀಕೃತ ಭತ್ತ ನಾಟಿ ಆಂದೋಲನಕ್ಕೆ ಯಂತ್ರದ ಮೂಲಕ ನಾಟಿ ಮಾಡಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು. ಯಾಂತ್ರೀಕೃತ ಕೃಷಿಯ ಅನುಕೂಲತೆಗಳ ಕುರಿತು ರೈತರಿಗೆ ಸರಿಯಾದ ಮಾಹಿತಿ ನೀಡಿ ಕೃಷಿಯನ್ನು ಲಾಭದಾಯಕವಾಗಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯ ಈ ನಡೆಯಬೇಕಿದೆ ಎಂದವರು ಅಭಿಪ್ರಾಯ ಪಟ್ಟರು.

ಭತ್ತ ಕೇವಲ ಆಹಾರ ಮಾತ್ರವಾಗಿರದೇ, ನಮ್ಮ ಸಂಸ್ಕೃತಿಯೂ ಆಗಿದೆ. ಜಿಲ್ಲೆಯಲ್ಲಿ 1.30 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಇಂಥ ಭತ್ತದ ಕೃಷಿಗೆ ಮರುಜೀವ ನೀಡುವ ಕಾರ್ಯ ಈಗ ಆಗಬೇಕಿದೆ ಎಂದರು. ಭತ್ತದ ಉತ್ಪಾದನೆ ಹೆಚ್ಚಿಸಲು, ಖರ್ಚು ತಗ್ಗಿಸಲು ಕಳೆದೆರಡು ವರ್ಷಗಳಿಂದ ಕೃಷಿ ಇಲಾಖೆ, ವಿಜ್ಞಾನಿಗಳ ಮುಖಾಂತರ ನಿರಂತರ ಪ್ರಯತ್ನ ನಡೆಸುತ್ತಿದೆ. ಹೊಸ ತಳಿಗಳ ಅಭಿವೃದ್ಧಿಗೆ ಸಮಯಾವಕಾಶ ಬೇಕಿದೆ ಎಂದವರು ಹೇಳಿದರು.

ವೆಚ್ಚದಲ್ಲಿ ಕಡಿತ:

 ಯಂತ್ರೋಪಕರಣ ಬಳಕೆ ಎಲ್ಲ ರೈತರಿಗೆ ಲಭ್ಯವಾಗಲು ಕೃಷಿಯಂತ್ರ ಧಾರೆ ಕೇಂದ್ರಗಳಲ್ಲಿ ಬಾಡಿಗೆಗೆ ಲ್ಯವಾಗಲಿದೆ ಎಂದ ಕೃಷ್ಣ ಬೈರೇಗೌಡ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೃಷಿಯಂತ್ರ ಬಾಡಿಗೆ ಕೇಂದ್ರಗಳ ಸಂಖ್ಯೆ 7ಕ್ಕೇರಿದೆ. ರೈತರಿಂದ ಬೇಡಿಕೆ ಬಂದರೆ ಇಂತಹ ಇನ್ನೂ ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಆಸಕ್ತ ರೈತರಿಗೆ ಸಬ್ಸಿಡಿಯನ್ನು ನೀಡಲಾಗುವುದು ಎಂದರು.

ಯಂತ್ರೋಪಕರಣ ಬಳಕೆ ಎಲ್ಲ ರೈತರಿಗೆ ಲ್ಯವಾಗಲುಕೃಷಿಯಂತ್ರಾರೆ ಕೇಂದ್ರಗಳಲ್ಲಿ ಬಾಡಿಗೆಗೆ ಲ್ಯವಾಗಲಿದೆ ಎಂದ ಕೃಷ್ಣ ಬೈರೇಗೌಡ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೃಷಿಯಂತ್ರ ಬಾಡಿಗೆ ಕೇಂದ್ರಗಳ ಸಂಖ್ಯೆ 7ಕ್ಕೇರಿದೆ. ರೈತರಿಂದ ಬೇಡಿಕೆ ಬಂದರೆ ಇಂತಹ ಇನ್ನೂ ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಆಸಕ್ತ ರೈತರಿಗೆ ಸಬ್ಸಿಡಿಯನ್ನು ನೀಡಲಾಗುವುದು ಎಂದರು. ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆಯಿಂದ ಕೃಷಿಕರು ಅನುಕೂಲ ಪಡೆಯುತ್ತಿದ್ದು, ರೈತರಿಗೆ ಅನುಕೂಲವಾಗುವ ಎಲ್ಲ ವ್ಯವಸ್ಥೆಗಳನ್ನು ಸರಕಾರ ಆದ್ಯತೆ ಮೇಲೆ ಕೈಗೊಳ್ಳುತ್ತಿದೆ. ರಸಗೊಬ್ಬರಕ್ಕೆ ಪರ್ಯಾಯವನ್ನು ಬಳಸಿ ಎಂದು ಕೃಷಿಕರಿಗೆ ಸಲಹೆ ನೀಡಿದ ಸಚಿವರು, ಸ್ತ್ರೀ ಶಕ್ತಿ ಸಂಘಗಳ ಮೂಲಕ ನರ್ಸರಿ ಮಾಡಿ. ನೆಟ್ ವರ್ಕಿಂಗ್ ಮೂಲಕ ಯಾಂತ್ರಿಕ ಕೃಷಿಯನ್ನು ಕೃಷಿಕರಿಗೆ ಪರಿಚಯಿಸಿ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಎಲ್ಲರೂ ಸೇರಿ ರೈತರಿಗೆ ಮಾಹಿತಿ ನೀಡಿ, ತರಬೇತಿ ನೀಡಿ ಎಂದು ಸಚಿವರು ಸಲಹೆ ನೀಡಿದರು.

ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆಯಿಂದ ಕೃಷಿಕರು ಅನುಕೂಲ ಪಡೆಯುತ್ತಿದ್ದು, ರೈತರಿಗೆ ಅನುಕೂಲವಾಗುವ ಎಲ್ಲ ವ್ಯವಸ್ಥೆಗಳನ್ನು ಸರಕಾರ ಆದ್ಯತೆ ಮೇಲೆ ಕೈಗೊಳ್ಳುತ್ತಿದೆ. ರಸಗೊಬ್ಬರಕ್ಕೆ ಪರ್ಯಾಯವನ್ನು ಬಳಸಿ ಎಂದು ಕೃಷಿಕರಿಗೆ ಸಲಹೆ ನೀಡಿದ ಸಚಿವರು, ಸ್ತ್ರೀ ಶಕ್ತಿ ಸಂಘಗಳ ಮೂಲಕ ನರ್ಸರಿ ಮಾಡಿ. ನೆಟ್ ವರ್ಕಿಂಗ್ ಮೂಲಕ ಯಾಂತ್ರಿಕ ಕೃಷಿಯನ್ನು ಕೃಷಿಕರಿಗೆ ಪರಿಚಯಿಸಿ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಎಲ್ಲರೂ ಸೇರಿ ರೈತರಿಗೆ ಮಾಹಿತಿ ನೀಡಿ, ತರಬೇತಿ ನೀಡಿ ಎಂದು ಸಚಿವರು ಸಲಹೆ ನೀಡಿದರು. ಯಾಂತ್ರೀಕೃತ ಭತ್ತ ಬೇಸಾಯದ ಸಿಡಿ ಬಿಡುಗಡೆ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಆಹಾರ ಅಮೃತವಾಗಲಿ. ಕೃಷಿಕರಿಗೆ ಕ್ರಿಮಿನಾಶಕ, ಗೊಬ್ಬರ ಬಳಕೆ ಬಗ್ಗೆ ಸಮಗ್ರ ಮಾಹಿತಿ ನೀಡಿ ಎಂದರು. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಚಾಂತಾರು ಗ್ರಾಪಂ ಅಧ್ಯಕ್ಷ ಸರಸ್ವತಿ ಉಪಸ್ಥಿತರಿದ್ದರು.

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎಂ.ಕೆ.ನಾಯ್ಕಾ ಸ್ವಾಗತಿಸಿದರು. ವಿವಿಯ ಉಪಕುಲಪತಿ ಡಾ. ಸಿ.ವಾಸುದೇವಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ಬ್ರಹ್ಮಾವರ ವಲಯ ಸಂಶೋಧನಾ ಕೇಂದ್ರದ ಸಂಜೀವ ಕ್ಯಾತಪ್ಪನರ್ ಕಾರ್ಯಕ್ರಮ ನಿರ್ವಹಿಸಿದರೆ, ಸಹ ಸಂಶೋಧನಾ ನಿರ್ದೇಶಕ ಎಂ.ಹನುಮಂತಪ್ಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News