ಉದುಮ: ಜಿಪಂ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ
Update: 2016-07-11 12:19 GMT
ಕಾಸರಗೋಡು, ಜು.11: ಕಾಸರಗೋಡು ಜಿಲ್ಲಾ ಪಂಚಾಯತ್ನ ಉದುಮ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಪ್ರಮುಖ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದರು.
ಐಕ್ಯರಂಗದ ಪಿ.ಕೆ. ಶಾನ್ವಾಝ್, ಎಡರಂಗದ ಮೊಯ್ದಿನ್ ಕುಂಞಿ ಕಳ್ನಾಡ್, ಬಿಜೆಪಿಯಿಂದ ಬಾಬು ರಾಜು ಜಿಲ್ಲಾಧಿಕಾರಿ ಇ. ದೇವದಾಸನ್ರಿಗೆ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಸದಸ್ಯ ಪಾದೂರು ಕುಂಞಾಂಬು ಅವರ ನಿಧನದ ಹಿನ್ನೆಲೆಯಲ್ಲಿ ತೆರವಾಗಿರುವ ಈ ವಾರ್ಡ್ಗೆ ಜುಲೈ 28 ರಂದು ಉಪ ಚುನಾವಣೆ ನಡೆಯಲಿದೆ.