ಬಾವಿಗೆ ಬಿದ್ದು ಮೃತ್ಯು
Update: 2016-07-11 18:23 GMT
ಬ್ರಹ್ಮಾವರ, ಜು.11: ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರವಿವಾರ ಸಂಜೆ ಬಾರ್ಕೂರು ಸಮೀಪ ನಡೆದಿದೆ.
ಮೃತರನ್ನು ನರಸಿಂಹ ಮಡಿವಾಳ (51) ಎಂದು ಗುರುತಿಸಲಾಗಿದೆ. ಇವರು ನಡೆದುಕೊಂಡು ಹೋಗುವಾಗ ಗದ್ದೆ ಬದಿಯಲ್ಲಿರುವ ಬಾವಿಗೆ ಅಕಸ್ಮಿಕವಾಗಿ ಬಿದ್ದರೆನ್ನಲಾಗಿದೆ. ಕೂಡಲೇ ಇವರನ್ನು ಮೇಲಕ್ಕೆತ್ತಿದ ಸ್ಥಳೀಯರು ಬಳಿಕ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಕಾರಣ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.