ದ್ವಿತೀಯ ಪಿಯುಸಿ: ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ

Update: 2016-07-15 14:35 GMT

ಪುತ್ತೂರು, ಜು.15: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅನನ್ಯ ರೈ ಮತ್ತು ಅನನ್ಯ ಶೆಟ್ಟಿ. ಯು. ಇವರು ಹೆಚ್ಚುವರಿ ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಎಂದು ಕಾಲೇಜ್‌ನ ಪ್ರಾಂಶುಪಾಲ ಜೀವನ್‌ದಾಸ್ ತಿಳಿಸಿದ್ದಾರೆ.

ಅನನ್ಯ ರೈ ಅವರು ಭೌತಶಾಸ್ತ್ರದಲ್ಲಿ 85, ರಸಾಯನಶಾಸ್ತ್ರದಲ್ಲಿ 98, ಗಣಿತದಲ್ಲಿ 77 ಮತ್ತು ಜೀವಶಾಸ್ತ್ರದಲ್ಲಿ 92 ಅಂಕಗಳ ಮೂಲಕ ಒಟ್ಟು 515 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಅನನ್ಯ ಶೆಟ್ಟಿ ಅವರು ಭೌತಶಾಸ್ತ್ರದಲ್ಲಿ 79, ರಸಾಯನಶಾಸ್ತ್ರದಲ್ಲಿ 95, ಗಣಿತದಲ್ಲಿ 78 ಮತ್ತು ಜೀನಶಾಸ್ತ್ರದಲ್ಲಿ 92 ಅಂಕಗಳ ಮೂಲಕ ಒಟ್ಟು 519 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಈ ಮೂಲಕ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ 181, ವಾಣಿಜ್ಯ ವಿಭಾಗದಲ್ಲಿ 90 ಕಲಾ ವಿಭಾಗದಲ್ಲಿ 3 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News