ಕಾರ್ಗಿಲ್ ವಿಜಯ ದಿವಸ

Update: 2016-07-25 18:28 GMT

ಶ್ರೀನಗರ, ಜು.25: ಜಮ್ಮು-ಕಾಶ್ಮೀರದ ದ್ರಾಸ್ ವಿಭಾಗದಲ್ಲಿರುವ ಯುದ್ಧ ಸ್ಮಾರಕಕ್ಕೆ ಸೋಮವಾರ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರು 1999ರ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ಯೋಧರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿದರು.

ಹಿರಿಯ ಸೇನಾಧಿಕಾರಿಗಳಾದ ಲೆಜಡಿ.ಎಸ್.ಹೂಡಾ ಮತ್ತು ಲೆಜ ಎಸ್.ಕೆ.ಪಟ್ಯಾಲ್ ಅವರು ಜಸಿಂಗ್ ಜೊತೆಯಲ್ಲಿದ್ದರು. ಈ ವೇಳೆ ಜಸಿಂಗ್ ಅವರು ಹುತಾತ್ಮ ಯೋಧರ ಪತ್ನಿಯರು ಮತ್ತು ಬಂಧುಗಳೊಂದಿಗೆ ಸಂವಾದ ನಡೆಸಿದರು.
‘ಆಪರೇಷನ್ ವಿಜಯ್ ’ನಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವಿನ ನೆನಪಿಗಾಗಿ ಸೇನೆಯು ಒಂದು ವಾರ ಕಾಲ ಹಮ್ಮಿಕೊಂಡಿರುವ 17ನೆ ಕಾರ್ಗಿಲ್ ವಿಜಯ ದಿವಸ್ ಆಚರಣೆಯು ಮಂಗಳವಾರ ಸಂಪನ್ನಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News