ರಾಜ್ನಾಥ್ ಬಂದರೆ ಪಾಕ್ನಾದ್ಯಂತ ಪ್ರತಿಭಟನೆ: ಉಗ್ರ ಹಫೀಝ್ ಎಚ್ಚರಿಕೆ
Update: 2016-08-01 16:10 GMT
ಲಾಹೋರ್, ಆ. 1: ಗೃಹ ಸಚಿವ ರಾಜ್ನಾಥ್ ಸಿಂಗ್ ‘‘ಅಮಾಯಕ ಕಾಶ್ಮೀರಿಗಳ ಹತ್ಯೆಗೆ ಜವಾಬ್ದಾರಿ’’ ಎಂದು ಆರೋಪಿಸಿರುವ ಪಾಕಿಸ್ತಾನದ ಜಮಾತ್-ಉದ್-ದವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ ಭಯೋತ್ಪಾದಕ ಹಫೀಝ್ ಸಯೀದ್, ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸಲು ಅವರು ಇಸ್ಲಾಮಾಬಾದ್ಗೆ ಬಂದರೆ ತನ್ನ ಸಂಘಟನೆಯು ದೇಶವ್ಯಾಪಿ ಪ್ರತಿಭಟನೆ ನಡೆಸುವುದು ಎಂದು ಎಚ್ಚರಿಸಿದ್ದಾನೆ.
‘‘ಅಮಾಯಕ ಕಾಶ್ಮೀರಿಗಳ ಹತ್ಯೆಗೆ ಕಾರಣವಾಗಿರುವ ರಾಜ್ನಾಥ್ ಸಿಂಗ್ರನ್ನು ಸ್ವಾಗತಿಸುವ ಮೂಲಕ ಕಾಶ್ಮೀರಿಗಳ ಗಾಯಕ್ಕೆ ಉಪ್ಪು ಸವರಲು ಹೊರಟಿರುವಿರೇ ಎಂದು ನಾನು ಪಾಕಿಸ್ತಾನಿ ಸರಕಾರವನ್ನು ಕೇಳಬಯಸುತ್ತೇನೆ’’ ಎಂದುಇಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ 2008ರ ಮುಂಬೈ ದಾಳಿಯ ರೂವಾರಿ ತಿಳಿಸಿದ್ದಾನೆ.