ಕೊಯ್ನಡು ಬಳಿ ರಸ್ತೆ ಅಪಘಾತ: ಕಾರು ಚಾಲಕ ಮೃತ್ಯು; ಕರಾಯ ಮಸೀದಿಯ ಮುದರ್ರಿಸ್ ಗಂಭೀರ

Update: 2016-08-08 08:04 GMT

ಸುಳ್ಯ, ಆ.8: ಕಾರೊಂದು ಲಾರಿಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟು, ಉಪ್ಪಿನಂಗಡಿ ಕರಾಯ ಮಸೀದಿಯ ಮುದರ್ರಿಸ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಮೀಪದ ಕೊಯ್ನಿಡು ಎಂಬಲ್ಲಿ ಸಂಭವಿಸಿದೆ.

ಕರಾಯ ಬಳಿಯ ಕಡಂಬಿಲ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಮುಹಮ್ಮದ್ ಅಶ್ರಫ್ ಮೃತ ಕಾರು ಚಾಲಕ. ಉಪ್ಪಿನಂಗಡಿ ಕರಾಯ ಮಸೀದಿಯಲ್ಲಿ ಮುದರ್ರಿಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶುಂಠಿಕೊಪ್ಪ ನಿವಾಸಿ ರಶೀದ್ ಬಾಖವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News