ಇಂದು ಶಿಲಾನ್ಯಾಸ

Update: 2016-08-16 18:36 GMT

ಉಡುಪಿ, ಆ.16: ಕಾಪು ಹಾಗೂ ಕುಂದಾಪುರ ತಾಲೂಕುಗಳಲ್ಲಿ ಆ.17ರಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಳ್ಳಲಿರುವ ಕಾಲುಸಂಕ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9:30ಕ್ಕೆ ತಾಲೂಕಿನ ಆತ್ರಾಡಿ ಗ್ರಾಪಂ ವ್ಯಾಪ್ತಿಯ ಬಾಳ್ಕಟ್ಟ ಮತ್ತು ಬಾಳ್ಕಟ್ಟ ಬೀಡು ನಡುವೆ ಕಾಲುಸಂಕ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ, 10:30ಕ್ಕೆ ಬೈರಂಪಳ್ಳಿ ಗ್ರಾಪಂ ವ್ಯಾಪ್ತಿಯ 41ನೆ ಶಿರೂರು ಕೊಡ್ಸರಬೆಟ್ಟು ಕೃಷ್ಣ ನಾಯ್ಕರ ಮನೆ ಬಳಿ ಸಾರ್ವಜನಿಕ ತೋಡಿಗೆ ಕಾಲುಸಂಕ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ, 11:20ಕ್ಕೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಪಂ ವ್ಯಾಪ್ತಿಯ ತೋಟದಬೆಟ್ಟು ಹೊಳೆಗೆ ಕಾಲುಸಂಕ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ, 11:45ಕ್ಕೆ ಕುಂಬಾಶಿ ಗ್ರಾಪಂ ವ್ಯಾಪ್ತಿಯ ಮಿತ್ಸರಬೆಟ್ಟು ಮತ್ತು ಹೊಳೆಕಟ್ಟು ನಡುವಿನ ಹಳ್ಳಕ್ಕೆ ಕಾಲು ಸಂಕ ನಿರ್ಮಾಣ ಕಾಮಗಾಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News