×
Ad

ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಪಾತ್ರ ಪ್ರಧಾನ: ಮಹೇಶ್

Update: 2016-08-29 22:50 IST

 ಚಿಕ್ಕಮಗಳೂರು, ಆ.29: ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್‌ಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ತಾವು ಮಾಡುವ ಕೆಲಸದ ಬಗ್ಗೆ ಆತ್ಮತೃಪ್ತಿ ಅಗತ್ಯ ಎಂದು ಚಿಕ್ಕಮಗಳೂರು ಜಿಲ್ಲಾ ಸಿವಿಲ್‌ಇಂಜಿನಿಯರ್ಸ್‌ ಅಸೋಸಿಯೇಷನ್ ನೂತನ ಅಧ್ಯಕ್ಷ ಎಂ.ಎಸ್.ಮಹೇಶ್(ಮಲ್ಲಪ್ಪ) ಅಭಿಪ್ರಾಯಿಸಿದರು.

ನಗರದ ಲಯನ್ಸ್ ಸೇವಾ ಭವನದಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಷನ್ 2015-16ನೆ ಸಾಲಿನ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ತಂಡದೊಂದಿಗೆ ಪದಗ್ರಹಣ ಮಾಡಿದ ಅವರು, ಸರ್ವಾನುಮತದ ಆಯ್ಕೆಗಾಗಿ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಇಂಜಿನಿಯರ್‌ಗಳಲ್ಲಿ ಪರಸ್ಪರ ಸಹಕಾರ, ಸೌಹಾರ್ದತೆ ಅಗತ್ಯ. ಹೊಸ ತಂತ್ರಜ್ಞಾನವನ್ನು ಅರಿಯುವ-ಅಳವಡಿಸಿಕೊಳ್ಳುವ ಕುತೂಹಲ-ಆಸಕ್ತಿ ನಮ್ಮದಾಗಬೇಕು. ನಿರ್ಮಾಣ ವೆಚ್ಚವನ್ನು ಮಿತಗೊಳಿಸಿ ಹೆಚ್ಚು ಬಾಳಿಕೆ ಬರುವಂತೆ ಸದೃಢ ನಿರ್ಮಾಣದಲ್ಲಿ ತೊಡಗುವುದರಿಂದ ಗ್ರಾಹಕರಿಗೂ ಸಂತಸವಾಗುತ್ತದೆ ಎಂದ ಮಹೇಶ್, ಸಮಯ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು. ನಿರ್ವಹಿಸುವ ಕೆಲಸದ ಬಗ್ಗೆ ಆತ್ಮಾವಲೋಕನದಿಂದ ಉತ್ತಮ ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ಕಾಣಬಹುದೆಂದರು. ಸಮಾಜದ ಅಭಿವೃದ್ಧಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯರಂತಹ ಇಂಜಿನಿಯರ್‌ಗಳ ಕಾರ್ಯನಿರ್ವಹಣೆ ದೂರದೃಷ್ಟಿ, ಸಮಾಜಪ್ರೀತಿ ನಮಗೆಲ್ಲ ಆದರ್ಶವಾಗಬೇಕು ಎಂದ ಅವರು, ಜಿಲ್ಲಾ ಸಂಘವನ್ನು ಸದೃಢಗೊಳಿಸಲು ಸದಸ್ಯರೆಲ್ಲ ಕೈಜೋಡಿಸಿದಾಗ ಸಮಾಜಕ್ಕೆ ಉಪಯುಕ್ತವಾದ ಸೇವಾಕಾರ್ಯಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ. ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸುವತ್ತ ಪ್ರಯತ್ನ ಅಗತ್ಯ ಎಂದರು.

2016-17ನೇ ಸಾಲಿನ ಪದಾಧಿಕಾರಿಗಳಾಗಿ ಎಂ.ಎಸ್.ಮಹೇಶ್(ಅಧ್ಯಕ್ಷ), ಬಿ.ಎಸ್.ಹರೀಶ್ ಮತ್ತು ಉಮೇಶ್(ಉಪಾಧ್ಯಕ್ಷರು), ಬಿ.ಕೆ.ಗುರುಮೂರ್ತಿ(ಕಾರ್ಯದರ್ಶಿ), ಕಬೀರ್(ಸಹಕಾರ್ಯದರ್ಶಿ), ಮಲ್ಲಿಕಾರ್ಜುನ (ಖಜಾಂಚಿ), ಎಂ.ಎ.ನಾಗೇಂದ್ರ(ಸಂಘಟನಾ ಕಾರ್ಯದರ್ಶಿ), ಜಿ.ರಮೇಶ್(ಸಾಂಸ್ಕೃತಿಕ ಕಾರ್ಯದರ್ಶಿ), ನಿರ್ದೇಶಕರಾಗಿ ವೆಂಕಟೇಶ್, ಸತ್ಯನಾರಾಯಣ, ಜಗದೀಶ್, ಶ್ರೀಕಾಂತ, ಸ್ಟಾನಿ, ವಿನೋದ್, ನಾಗೇಂದ್ರ ಮತ್ತು ಗಂಗಾಧರ ಇದೇ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದರು.

  ಪದವಿ ಪ್ರದಾನ ಮಾಡಿದ ನಿರ್ಗಮಿತ ಅಧ್ಯಕ್ಷ ಎಸ್.ಆರ್.ಕಾಶಿಪ್ರಸಾದ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ಷದ ಸೀಮಿತ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ. ಸದಸ್ಯರು ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಮತ್ತಷ್ಟು ಕೆಲಸ ಮಾಡಲು ಸಾಧ್ಯವಾಗುತ್ತದೆ. ಬದುಕಿನಲ್ಲಿ ಸಮಯಪ್ರಜ್ಞೆ ಮುಖ್ಯ. ಸಮಯ ಯಾರಿಗೂ ಕಾಯುವುದಿಲ್ಲ. ಇರುವ ಸಮಯವನ್ನು ಸದ್ಭಳಕೆ ಮಾಡಿಕೊಂಡು ಒಳ್ಳೆಯ ಕಾರ್ಯ ಮಾಡಬೇಕೆಂದರು.

ಹಿರಿಯ ಇಂಜಿನಿಯರ್ ಎಂ.ಆನಂದರಾವ್, ಮಾಜಿ ಅಧ್ಯಕ್ಷ ಡಿ.ಪಿ.ಕೃಷ್ಣಮೂರ್ತಿ, ಎಂ.ಗಣೇಶ್ ಮಾತನಾಡಿದರು. ಇಂಜಿನಿಯರ್‌ಗಳಾದ ಬಿ.ಸಿ.ಗಂಗಾಧರ್ ಸ್ವಾಗತಿಸಿ, ಜಿ.ರಮೇಶ್ ನಿರೂಪಿಸಿ, ನೂತನ ಕಾರ್ಯದರ್ಶಿ ಬಿ.ಕೆ.ಗುರುಮೂರ್ತಿ ವಂದಿಸಿದರು. ತೇಜಸ್ವಿನಿ ಯುವರಾಜ್ ಪ್ರಾರ್ಥಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News