ಕರ್ಣಾಟಕ ಬ್ಯಾಂಕ್ಗೆ ‘ಗ್ರೀನ್ಟೆಕ್ ಸೇಫ್ಟಿ ಅವಾರ್ಡ್
Update: 2016-08-30 18:53 GMT
’ ಮಂಗಳೂರು, ಆ.30: ಕರ್ಣಾಟಕ ಬ್ಯಾಂಕ್ಗೆ ಪ್ರಸಕ್ತ ವರ್ಷದ ರಾಷ್ಟ್ರಮಟ್ಟದ ಪ್ರಶಸ್ತಿ ‘ಗ್ರೀನ್ಟೆಕ್ ಸೇಫ್ಟಿ ಅವಾರ್ಡ್’ ಪಡೆದಿದೆ. ಗ್ರೀನ್ಟೆಕ್ ಫೌಂಡೇಶನ್ ಪ್ರತಿವರ್ಷ ಸಾರ್ವಜನಿಕ ಹಾಗೂ ಖಾಸಗಿ ವಲಯಗಳೆರಡಕ್ಕೂ ಗ್ರೀನ್ಟೆಕ್ ಅವಾರ್ಡ್ ನೀಡುತ್ತದೆ. ಈ ಸಂಬಂಧ ಗ್ರೀನ್ಟೆಕ್ ಫೌಂಡೇಶನ್ ಅಧ್ಯಕ್ಷ ಹಾಗೂ ಸಿಇಒ ಕಮಲೇಶ್ವರ ಸರನ್ರವರು ಬ್ಯಾಂಕ್ನ ಎಂಡಿ ಹಾಗೂ ಸಿಇಒ ಪಿ.ಜಯರಾಮ್ ಭಟ್ಗೆ ಪ್ರಮಾಣ ಪತ್ರ ಹಾಗೂ ಟ್ರೋಫಿಯನ್ನು ಪ್ರದಾನ ಮಾಡಿದರು. ಈ ಸಂದರ್ಭ ಕೆನರಾ ಬ್ಯಾಂಕ್ನ ಮುಖ್ಯ ಸಲಹೆಗಾರ, ಕಾನ್ಫರೆನ್ಸ್ ಅಧ್ಯಕ್ಷ ಹಾಗೂ ಮಾಜಿ ಸಿಎಂಡಿ ಉಪಸ್ಥಿತರಿದ್ದರು.