ಒಡೆದ ನೀರಿನ ಪೈಪ್: ಮಂಗಳೂರಿಗೆ ಮತ್ತೆ ನೀರು ಪೂರೈಕೆಯಲ್ಲಿ ವ್ಯತ್ಯಯ

Update: 2016-08-31 03:49 GMT

ಮಂಗಳೂರು, ಆ.31: ಮಂಗಳೂರು ಮಹಾನಗರ ಪಾಲಿಕೆಗೆ ನೀರು ಸರಬರಾಜು ಮಾಡುವ ಕೊಳವೆ ಒಡೆದು ಹೋದ ಪರಿಣಾಮ ನಗರದ ಕೆಲವು ಭಾಗಗಳಲ್ಲಿ ಇಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ತುಂಬೆಯಿಂದ ಡ್ಯಾಂನಿಂದ ಮಂಗಳೂರು ನಗರಕ್ಕೆ ಪೂರೈಸುವ ಪೈಪ್‌ಲೈನ್ ನಿನ್ನೆ ರಾತ್ರಿ ಅಡ್ಯಾರ್‌ನಲ್ಲಿ ಒಡೆದು ಹೋಗಿದೆ. ಇದರಿಂದ ನೀರು ಸೋರಿಕೆಯಾಗುತ್ತಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿದುಬಂದಿದೆ.
ಇದೇ ಪ್ರದೇಶದಲ್ಲಿ ಕಳೆದ ವರ್ಷ ನೀರು ಸರಬರಾಜಿನ ಕೊಳವೆ ಒಡೆದ ಪರಿಣಾಮ ಐದು ದಿನಗಳ ಕಾಲ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಇದೀಗ ಮಳೆಗಾಲದಲ್ಲೂ ನಗರಕ್ಕೆ ಮತ್ತೆ ನೀರಿನ ಸಮಸ್ಯೆ ಎದುರಾಗಿದೆ.
ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್‌ಎಂ. ಹರಿನಾಥ್, ತುಂಬೆಯಿಂದ ನೀರು ಪೂರೈಸುವ ಎರಡು ಪೈಪ್‌ಗಳಲ್ಲಿ ಒಂದು ಅಡ್ಯಾರ್ ಬಳಿ ಒಡೆದು ಹೋಗಿದೆ. ಇದರ ಶೀಘ್ರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News