ಸಕಲೇಶಪುರದ ಯುವಕನ ಮೃತದೇಹ ಉಪ್ಪಿನಂಗಡಿ ರಸ್ತೆಯಲ್ಲಿ ಪತ್ತೆ

Update: 2016-08-31 04:35 GMT

ಉಪ್ಪಿನಂಗಡಿ, ಆ.31: ಗಂಭೀರ ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹವು ಇಲ್ಲಿಗೆ ಸಮೀಪದ ವಳಾಲು ಎಂಬಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಂದು ಮುಂಜಾನೆ ಪತ್ತೆಯಾಗಿದೆ.
ಮೃತಪಟ್ಟ ಯುವಕನನ್ನು ಸಕಲೇಶಪುರ ಮೂಲದ ಯುವಕ ಶೌಕತ್ ಎಂದು ಗುರುತಿಸಲಾಗಿದೆ. ಯಾವುದಾದರೂ ಶೌಕತ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ವಾಹನ ಅಪಘಾತಕ್ಕೀಡಾಗಿ ಮೃತಪಟ್ಟಿರಬಹುದೆಂದು ಅಥವಾ ಕೊಲೈಗೈದು ರಸ್ತೆಯಲ್ಲಿ ಎಸೆದು ಹೋಗಿರಬಹುದು ಎಂಬ ಅನುಮಾನಗಳು ಸ್ಥಳೀಯವಾಗಿ ಕೇಳಿಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News