ಸೆ.3ರಿಂದ ಬಂಟರ ಸಂಘದ ಗಣೇಶೋತ್ಸವ

Update: 2016-08-31 18:58 GMT

ಮಂಗಳೂರು, ಆ.31: ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ತಾಲೂಕು ಬಂಟರ ಸಂಘಗಳು ಮತ್ತು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 13ನೆ ವರ್ಷದ ಗಣೇಶೋತ್ಸವ ಸೆ.3ರಿಂದ 7ರ ವರೆಗೆ ಬಂಟ್ಸ್ ಹಾಸ್ಟೆಲ್ ಬಳಿಯ ಓಂಕಾರ ನಗರದಲ್ಲಿ ನಡೆಯಲಿದೆ ಎಂದು ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಯೋಧರ ಬದುಕು ಯುವ ಪೀಳಿಗೆಗೆ ಆದರ್ಶವಾಗಲಿ ಎನ್ನುವ ನಿಟ್ಟಿನಲ್ಲಿ ಸೆ.3ರಂದು ‘ನಮ್ಮ ರಾಷ್ಟ್ರ ರಕ್ಷಕರ ಜೊತೆಗೆ ಒಂದು ಸುಂದರ ಸಂಜೆ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಾಲುಮರದ ತಿಮ್ಮಕ್ಕ, ಎಂ.ಪಿ. ನೊರನ್ಹಾ, ಗಂಗಾಧರ ಅೊಸಬೆಟ್ಟು, ಜಿಪಂ ಸದಸ್ಯ ಶಾಹುಲ್ ಹಮೀದ್, ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು, ನೇಹಾ ಶೆಟ್ಟಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ರವೀಂದ್ರ ಪೂಂಜಾ, ಡಾ.ದೇವಿಪ್ರಸಾದ್ ಶೆಟ್ಟಿ ಐಕಳ ಬಾವ, ಡಾ.ಕೆ.ವಿ.ರಾವ್,ಅಶೋಕ್ ಸುವರ್ಣ, ವಾಮನ ಮರೋಳಿ, ಶಶಿಧರ ಅಡಪ ಮೊದಲಾದವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
 ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಮಂಜುನಾಥ ಭಂಡಾರಿ ಶೆಡ್ಡೆ, ಡಾ.ಆಶಾಜ್ಯೋತಿ ರೈ, ಸಿಎ.ಶಾಂತರಾಮ ಶೆಟ್ಟಿ, ನಿಟ್ಟೆ ಗುತ್ತು ರವಿರಾಜ ಶೆಟ್ಟಿ, ಕೃಷ್ಣ ಪ್ರಸಾದ್ ರೈ, ಬಾಲಕೃಷ್ಣ ಶೆಟ್ಟಿ, ದಿವಾಕರ ಸಾಮಾನಿ, ಜಗನ್ನಾತ ಶೆಟ್ಟಿ ಬಾಳ, ಬಿ.ಶೇಖರ ಶೆಟ್ಟಿ, ಕೃಷ್ಣರಾಜ ಸುಲಾಯ, ಕೆಂಚನೂರು ಸೋಮಶೇಖರ ಶೆಟ್ಟಿ, ಮೇಘನಾಥ ಶೆಟ್ಟಿ, ಜಯರಾಮ ಸಾಂತ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News