ಕಲ್ಯಾಣಪುರ: ಕೊಂಕಣಿ ಮಾನ್ಯತಾ ದಿನಾಚರಣೆ

Update: 2016-09-03 10:30 GMT

ಉಡುಪಿ, ಸೆ.3: ಉಡುಪಿ ಜಿಲ್ಲಾ ಕೊಂಕಣಿ ಸಂಘಟನೆ ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಐಕಾಪ್ ಸಂಘಟನೆಯ ಆಶ್ರಯದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಇತ್ತೀಚೆಗೆ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪಿಲಾರ್ ಪಾದರ್ಸ್‌ ಸಂಸ್ಥೆಯ ರೆ.ಫಾ.ನೆಲ್ಸನ್ ಪುರ್ಟಾಡೊ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರೆ.ಫಾ.ಅನಿಲ್ ಪ್ರಕಾಶ್ ಕ್ಯಾಸ್ತಲಿನೊ ಮಾತನಾಡಿದರು.
ಕೊಂಕಣಿ ಸಂಘಟನೆಯ ಅಧ್ಯಕ್ಷ ಲುವಿಸ್ ಡಿ. ಆಲ್ಮೇಡಾ, ಐಕಾಪ್ ಸಂಘಟನೆಯ ಸಂಚಾಲಕ ನಿಶಾ ಕ್ರಾಸ್ತಾ ಉಪಸ್ಥಿತರಿದ್ದರು. ಅಧ್ಯಕ್ಷೆ ಮೆಲಿಸಿಯಾ ಸ್ವಾಗತಿಸಿದರು. ಆ್ಯಂಡ್ರಿಯಾ ಡಿಸೋಜ ವಂದಿಸಿದರು. ಪ್ರೆಸಿಲ್ಲಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೊಂಕಣಿ ಜಾನಪದ ಹಾಡುಗಳು, ಸಂಗೀತ ಮತ್ತು ಮಿಮಿಕ್ರಿ ಕಾರ್ಯಕ್ರಮ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News