ಕರಾಮುವಿವಿ ಪರೀಕ್ಷೆಗಳು ಮುಂದೂಡಿಕೆ

Update: 2016-09-13 18:53 GMT

ಉಡುಪಿ, ಸೆ.13: ಮಂಗಳವಾರ(ಸೆ.14) ನಡೆಯಬೇಕಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಬಿಎ/ಬಿಕಾಂ ಹಾಗೂ ಎಂಎ/ಎಂಕಾಂನ ಎಲ್ಲ ಪರೀಕ್ಷೆಗಳನ್ನು ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ಮುಂದೂಡಲಾದ ಪರೀಕ್ಷೆಗಳ ವೇಳಾಪಟ್ಟಿಯನ್ನು ತಿಳಿಸಲಾಗುವುದು. ಮಾಹಿತಿಗೆ ಉಡುಪಿ ಕರಾಮುವಿಯ ಬನ್ನಂಜೆಯಲ್ಲಿರುವ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಬಹುದು. ಅಥವಾ ವಿವಿಯ ವೆಬ್‌ಸೈಟ್ www.ksoumysore.edu.in, ದೂ.ಸಂ.: 0820-2522247ನ್ನು ಸಂಪರ್ಕಿಸ ಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News