ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ: ಯುವಕ ಮೃತ್ಯು

Update: 2016-09-17 03:45 GMT

ಮಂಜೇಶ್ವರ, ಸೆ.17: ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಉದ್ಯಾವರ ಜುಮಾ ಮಸೀದಿ ಸಮೀಪ ಇಂದು ಬೆಳಗ್ಗೆ ನಡೆದಿದೆ.

ಉದ್ಯಾವರ ಫಸ್ಟ್ ಸಿಗ್ನಲ್ ನಿವಾಸಿ ಫೈಝಲ್ ಎಂಬವರ ಪುತ್ರ ಗಫೂರ್(30) ಮೃತಪಟ್ಟ ಯುವಕ. ಈ ಹಿಂದೆ ಘಟಿಸಿದ ಅಪಘಾತವೊಂದರಲ್ಲಿ ತನ್ನ ಒಂದು ಕೈಯನ್ನು ಕಳಕೊಂಡಿದ್ದ ಗಫೂರ್ ಪೈಂಟಿಂಗ್ ಕಾರ್ಮಿಕನಾಗಿ ದುಡಿಯುತ್ತಿದ್ದರು. ಇದೀಗ ಸಂಭವಿಸಿದ ಅಪಘಾತ ಅವರ ಜೀವವನ್ನೇ ಬಲಿ ತೆಗೆದುಕೊಂಡಿದೆ. ಗಫೂರ್‌ನ ಮರಣ ಕಾರಣ ಉದ್ಯಾವರ ಪರಿಸರ ಶೋಕತಪ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News