ನಾಳೆ ಉಲಮಾಗಳ ಮತ್ತು ಮಸೀದಿ ಪದಾಧಿಕಾರಿಗಳ ಸ್ನೇಹ ಸಮ್ಮಿಲನ

Update: 2016-09-25 18:34 GMT

ಬಂಟ್ವಾಳ, ಸೆ.25: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಇವುಗಳ ಜಂಟಿ ಆಶ್ರಯದಲ್ಲಿ ಹುಖೂಕುಲ್ ಇಬಾದ್(ಮನುಕುಲದ ಸೇವೆ) ಅಭಿಯಾನ ನಡೆಯಲಿದೆ.

ಇದರ ಅಂಗವಾಗಿ ಬಂಟ್ವಾಳ ತಾಲೂಕಿನ ಎಲ್ಲಾ ಮಸೀದಿಗಳ ಖತೀಬರು, ಸದರ್/ಮುಅಲ್ಲಿಮರು ಮತ್ತು ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರು/ಕಾರ್ಯದರ್ಶಿ/ಕೋಶಾಧಿಕಾರಿಗಳ ಸ್ನೇಹ ಸಮ್ಮಿಲನ ಸೆ.27ರಂದು ಬೆಳಗ್ಗೆ 9:30ಕ್ಕೆ ಬಿರ್ವ ಆಡಿಟೋರಿಯಂ ಮೆಲ್ಕಾರ್‌ನಲ್ಲಿ ನಡೆಯಲಿದೆ.

ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ದುಅ ನೆರವೇರಿಸಲಿದ್ದು, ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಹುಖೂಕುಲ್ ಇಬಾದ್ ಬಗ್ಗೆ ತರಗತಿ ನಡೆಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತಿನ ಅಧ್ಯಕ್ಷ ಹಾಜಿ ಎಸ್. ಅಬ್ಬಾಸ್ ಸಜಿಪ ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ-7760508664 ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News