‘94 ಸಿ ಮತ್ತು 94 ಸಿಸಿ ಅರ್ಜಿ ವಿಲೇವಾರಿಗೆ ಕ್ರಮ’
Update: 2016-09-25 18:35 GMT
ಕಾರ್ಕಳ, ಸೆ.25: ಕರ್ನಾಟಕ ಭೂಮಂಜೂರಾತಿ ಅಧಿನಿಯಮ 94ಸಿ ಮತ್ತು 94ಸಿಸಿ ಅನ್ವಯ ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರ ಮೂಲಕ ತನಿಖೆ ನಡೆಸಿ ವರದಿ ಪಡೆದುಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.
ತನಿಖಾ ವರದಿ ಪರಿಶೀಲಿಸಿ ಮಂಜೂರಾತಿಗೆ ಯೋಗ್ಯ ಕಡತಗಳನ್ನು ಪರಿಶೀಲನೆಗೆ ತಹಶೀಲ್ದಾರರೇ ಸ್ವತಃ ಗ್ರಾಮಗಳಿಗೆ ಭೇಟಿ ನೀಡಿ ಮಂಜೂರಾತಿ ಕ್ರಮಕ್ಕೆ ಮುಂದಾಗಲಿದ್ದು, ಈ ಯೋಜನೆಯ ಜಾರಿಯಲ್ಲಿ ಯಾವುದೇ ಸಂಘ ಸಂಸ್ಥೆಯಾಗಲಿ, ಇತರೆ ವ್ಯಕ್ತಿಯನ್ನಾಗಲಿ ಭೇಟಿ ಮಾಡದೆ ಸಾರ್ವಜನಿಕರು ನೇರ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.