ಕೊಲೆಗೆ ತರಬೇತಿ ನೀಡುವ ಸಂಘಟನೆಗಳು ಕೇರಳದಲ್ಲಿವೆ: ಪಿಣರಾಯಿ ವಿಜಯನ್

Update: 2016-09-26 05:55 GMT

ತಿರುವನಂತಪುರಂ,ಸೆಪ್ಟಂಬರ್ 26: ಕೊಲೆನಡೆಸಲು ತರಬೇತಿ ಕೊಡುವ ಸಂಘಟನೆಗಳು ಕೇರಳದಲ್ಲಿವೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆಂದು ವರದಿಯಾಗಿದೆ. ಇವರಿಗೆ ನೇತೃತ್ವವನ್ನು ನೀಡುವ ರಾಜಕೀಯ ಪಕ್ಷಗಳೂ ಕೇರಳದಲ್ಲಿವೆ. ಕೇರಳದಲ್ಲಿನಡೆಯುತ್ತಿರುವ ರಾಜಕೀಯ ಕೊಲೆಪಾತಕಗಳ ಕುರಿತು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

ರಾಜಕೀಯಪಕ್ಷಗಳ ಸಭೆ ಕರೆಯುವುದರಿಂದ ಕೊಲೆಕೃತ್ಯಗಳನ್ನು ತಡೆಯಲು ಸಾಧ್ಯವಿಲ್ಲ. ಅಪರಾಧಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು ಮಾತ್ರ ಇದಕ್ಕಿರುವ ಏಕೈಕ ಪರಿಹಾರ. ಕೊಲೆಕೃತ್ಯಗಳನ್ನು ಕೊಲೆಕೃತ್ಯಗಳಾಗಿಯೇ ಪರಿಗಣಿಸಲಾಗುವುದು. ಈವರ್ಷ 334 ಹತ್ಯೆಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News