ಯೂತ್ ಲೀಗ್ ಮುಖಂಡನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

Update: 2016-09-26 18:49 GMT

ಕುಂಜತ್ತೂರು,ಸೆ.26: ಮಂಜೇಶ್ವರ ಬ್ಲಾಕ್ ಪಂ.ಅಧ್ಯಕ್ಷ ಎ.ಕೆ.ಎಂ.ಅಶ್ರಫ್‌ಉದ್ರಿಕ್ತ ಭಾಷಣದ ವಿರುದ್ಧ ನಿಯಮ ಪಾಲಕರು ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಡಿವೈಎಫ್‌ಐ ಉಪ್ಪಳ ವಿಲೇಜ್ ಅಧ್ಯಕ್ಷ ರಫೀಕ್ ಸೋಂಕಾಲ್ ಆಗ್ರಹಿಸಿದ್ದಾರೆ.

ಯೂತ್ ಲೀಗ್ ಕಾರ್ಯಕರ್ತರ ವಿರುದ್ಧ ಯಾರಾದರೂ ತಿರುಗಿದರೆ ಅಂತವರ ಕೈ ಕತ್ತರಿಸುವುದಾಗಿ ನೀಡಿದ ಹೇಳಿಕೆಯು ಅದು ಸಾಮಾನ್ಯ ಜನತೆಯ ವಿರುದ್ಧ ಒಂದು ಸವಾಲಾಗಿ ಪರಿಣಮಿಸಿದೆ. ಇಂತಹ ಉದ್ರಿಕ್ತ ಭಾಷಣಗೈದು ಕಾರ್ಯಕರ್ತರನ್ನು ಅಪರಾಧ ಕೃತ್ಯಗಳಿಗೆ ಪ್ರಚೋದಿಸುವಂತಹ ಧೋರಣೆಯ ವಿರುದ್ಧ ಲೀಗ್ ನೇತೃತ್ವ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News