ಮೂರು ದಿನಗಳಲ್ಲಿ 18ಸಾವಿರ ಕ್ಯೂಸೆಕ್ ನೀರು ಹರಿಸಿ ಕರ್ನಾಟಕ ಸರಕಾರಕ್ಕೆ ಸುಪ್ರೀಂ ಖಡಕ್ ಆದೇಶ

Update: 2016-09-27 14:17 GMT

ಹೊಸದಿಲ್ಲಿ, ಸೆ.27: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌‌ ಸೆ.30ಕ್ಕೆ ಮುಂದೂಡಿದ್ದು, ಇದೇ ವೇಳೆ  ಮೂರು ದಿನಗಳ  ತನಕ  ತಮಿಳುನಾಡಿಗೆ ಒಟ್ಟು 18 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರಕಾರಕ್ಕೆ ಇಂದು ಸುಪ್ರೀಂ ಕೋರ್ಟ್‌‌  ಆದೇಶ ನೀಡಿತು.

ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌‌ನಲ್ಲಿ ಸಲ್ಲಿರುವ ಆದೇಶ ಮಾರ್ಪಾಡು ಅರ್ಜಿಯ ವಿಚಾರಣೆ  ವಿಭಾಗೀಯ ಪೀಠದಲ್ಲಿ ನಡೆಯಿತು. ಎರಡು ರಾಜ್ಯಗಳ ವಾದವನ್ನು  ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ ವಿಭಾಗೀಯ ಪೀಠ ಆಲಿಸಿತು.

 ಸೆ.28 ರಿಂದ  ಸೆ.30ರತನಕ  ತಮಿಳುನಾಡಿಗೆ ತಲಾ 18  ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರಕಾರಕ್ಕೆ  ಆದೇಶ ನೀಡಿದಾಗ . "ಕರ್ನಾಟಕ ಸರಕಾರದ ಮೇಲೆ ಯಾವುದೇ ಒತ್ತಡ ಹೇರಬೇಡಿ ನಮ್ಮಲ್ಲಿ ನೀರಿಲ್ಲ " ಎಂದು  ಕರ್ನಾಟಕದ ಪರ ವಕೀಲ ಫಾಲಿ  ಎಸ್. ನಾರಿಮನ್ ಹೇಳಿದಾಗ " ನಿಮ್ಮ ನಿರ್ಣಯ ಏನೇ ಇದ್ದರೂ ಮೊದಲು ಎರಡು ದಿನ 12 ಸಾವಿರ ಕ್ಯೂಸೆಕ್ ನೀರು ಹರಿಸಿ. ನ್ಯಾಯಾಲಯ ಆದೇಶವನ್ನುಕರ್ನಾಟಕ ಸರಕಾರ ಪಾಲಿಸಬೇಕು " ಎಂದು ನ್ಯಾಯಪೀಠ ಕರ್ನಾಟಕ ಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಇದರೊಂದಿಗೆ ಕರ್ನಾಟಕ ಸರಕಾರಕ್ಕೆ ಸುಪ್ರೀಂನ  ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದೇ ವೇಳೆ ನ್ಯಾಯಾಲಯದ ಹೊರಗಡೆ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು . ಬಗೆಹರಿಸಲು ಸೆ.29ರ ಮೊದಲು ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ  ಸಭೆ ಕರೆಯುವಂತೆ ಅಟಾರ್ನಿ ಜನರಲ್‌ ಮುಕುಲ್ ರೊಹ್ಟಗಿ ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ರಾಜ್ಯದಲ್ಲಿ ಕುಡಿಯಲು ಮಾತ್ರ ನೀರಿದೆ. ತಮಿಳುನಾಡಿಗೆ ಕೊಡಲು ನೀರಿಲ್ಲ. ಸೆ.27ರ ತನಕ ತಮಿಳುನಾಡಿಗೆ ಆರು ಸಾವಿರ ಕ್ಯುಸೆಕ್‌ ಕಾವೇರಿ ನೀರು ಬಿಡಬೇಕೆಂದು  ಸೆ.20ರಂದು ನೀಡಿರುವ  ಆದೇಶವನ್ನು ಬದಲಾಯಿಸುವಂತೆ ಕೋರಿ ಕರ್ನಾಟಕ ಸರಕಾರ ಸೋಮವಾರ  ಸುಪ್ರೀಂ ಕೋರ್ಟ್‌‌ಗೆ  8 ಪುಟಗಳ ಅರ್ಜಿ ಸಲ್ಲಿಸಿತ್ತು.

ಇತ್ತೀಚೆಗೆ ವಿಧಾನ ಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನದಲ್ಲಿ ‘ ಕಾವೇರಿ ಕೊಳ್ಳದ ಡ್ಯಾಂಗಳ ನೀರನ್ನು ಕುಡಿಯುವುದಕ್ಕೆ ಮಾತ್ರ ಉಪಯೋಗಿಸುವ’ ಕುರಿತು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿತ್ತು. ಈ ನಿರ್ಣಯದ ಪ್ರತಿಯನ್ನು ರಾಜ್ಯದ ಪರ ವಕೀಲರು ಸುಪ್ರೀಂ ಕೋರ್ಟ್‌‌ಗೆ ಸಲ್ಲಿಸಿದ್ದರು.

ಇದೇ ವೇಳೆ ಸೆ. 5, 12 ಮತ್ತು 20ರಂದು ಹೊರಡಿಸಿರುವ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಬೇಕು. ಆದೇಶ ಪಾಲನೆಯಾಗುವ ತನಕ  ಕರ್ನಾಟಕ ಸಲ್ಲಿಸಿರುವ ಆದೇಶ ಮಾರ್ಪಾಡು ಅರ್ಜಿಯ ವಿಚಾರಣೆ ನಡೆಸದಂತೆ  ತಮಿಳುನಾಡು ಪರ ವಕೀಲರು ವಾದ ಮಂಡಿಸಿದರು.

ಯಾವ ಕಾನೂನಡಿ ನಿರ್ಣಯ ಕೈಗೊಂಡಿದ್ದಿರಾ ?  ಎಂದು ಸುಪ್ರೀಂ ಕೋರ್ಟ್   ಕರ್ನಾಟಕ ಸರಕಾರವನ್ನು ಪ್ರಶ್ನಿಸಿದ್ದು, ನ್ಯಾಯಾಯದ  ಆದೇಶವನ್ನು ಉಲ್ಲಂಘಿಸಿಲ್ಲ ಎಂದು ಕರ್ನಾಟಕದ ಪರ ವಕೀಲ ಫಾಲಿ  ಎಸ್. ನಾರಿಮನ್ ಅವರು ವಾದ ಮಂಡಿಸಿದರು.ನವೆಂಬರ್ 2016 ರ ಅಂತ್ಯ ದ ತನಕ ನೀರು ಬಿಡಲು ಸಾಧ್ಯವೇ ಇಲ್ಲ   ಎಂದು ಫಾಲಿ  ಎಸ್. ನಾರಿಮನ್ ಮತ್ತೆ ಹೇಗೆ ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೀರಿ ಎಂದು ? ನ್ಯಾಯ ಪೀಠ ಪ್ರಶ್ನಿಸಿದಾಗ "ಎಲ್ಲವೂ ದೇವರ  ಇಚ್ಛೆಯ ಮೇಲೆಯೇ ನಿರ್ಧಾರವಾಗಿಲಿದೆ" ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ನೀರು ಬಿಡಬೇಕೆಂಬ  ಸುಪ್ರೀಂ ಕೋರ್ಟ್  ಆದೇಶವನ್ನು  ಯಾಕೆ ಕರ್ನಾಟಕ ಸರಕಾರ   ಪಾಲಿಸಲಿಲ್ಲ ಎಂದು ತಮಿಳುನಾಡು ಪರ  ವಕೀಲರು ಪ್ರಶ್ನಿಸಿದರು. ನಮ್ಮ ಬೆಳೆಗಳು ಹಾಳಾಗುತ್ತಿವೆ ಎಂದು ವಕೀಲರು ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News