ಪಾಕ್ ವಶದಲ್ಲಿರುವ ಭಾರತದ ಯೋಧನ ಕುಟುಂಬಕ್ಕೆ ಇನ್ನೊಂದು ಆಘಾತ

Update: 2016-10-01 03:39 GMT

ಹೊಸದಿಲ್ಲಿ, ಅ.1: ಗಡಿ  ನಿಯಂತ್ರಣ ರೇಖೆಯ ಆಚೆಗಿರುವ ಉಗ್ರತಾಣಗಳ ಮೇಲೆ ಭಾರತ ದಾಳಿ ನಡೆಸಿದ ಬಳಿಕ ಪಾಕ್ ವಶದಲ್ಲಿರುವ ಭಾರತೀಯ ಯೋಧ ಚಂದು ಚೌಹಾಣ್ ಕುಟುಂಬದ ಪಾಲಿಗೆ ಇನ್ನೊಂದು ಆಘಾತ ಬಂದೆರಗಿದೆ. ಮಹಾರಾಷ್ಟ್ರದ ಧುಲೆ ಜಿಲ್ಲೆಯ ಬೋರ್ ವಿಹಿರ್ ಗ್ರಾಮದ ಚಂದು ಅವರ ಅಜ್ಜಿ ಹಾಗೂ ಅವರನ್ನು ಸಾಕಿದ ಲೀಲಾಬಾಯಿ ಪಾಟೀಲ್ ಅವರು ಆಘಾತದಿಂದ ಮೃತಪಟ್ಟಿದ್ದಾರೆ ಎಂದು ಮರಾಠಿ ಟಿ.ವಿ. ವಾಹಿನಿ ಐಬಿನ್ ಲೋಕಮತ್ ವರದಿ ಮಾಡಿದೆ.

ಚಂದು ಅವರ ಹೆತ್ತವರು ಮೃತಪಟ್ಟ ಬಳಿಕ ಇದೇ ಅಜ್ಜಿ ಚಂದುವನ್ನು ಸಾಕಿ ಸಲಹಿದ್ದರು.

ಪಾಕ್ ವಶದಲ್ಲಿರುವ ಚಂದು ಅವರ ಬಿಡುಗಡೆಗೆ ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಈಗಾಗಲೇ ಹೇಳಿದ್ದಾರೆ. ಚಂದು ಕುಟುಂಬದೊಂದಿಗೆ ಮಾತನಾಡಿರುವ ಅವರು, ಸರಕಾರದಿಂದ ಕುಟುಂಬಕ್ಕೆ ಸರ್ವ ನೆರವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News