ಐಎಎಸ್ ಟಾಪರ್ , ಶಿಕ್ಷಣ ಇಲಾಖೆ ನಿರ್ದೇಶಕ ಶಾ ಫೈಸಲ್ ಹೇಳಿಕೆಯಿಂದ ಭಾರೀ ವಿವಾದ !

Update: 2016-10-08 14:17 GMT

ಶ್ರೀನಗರ, ಅ.8: ಕಣಿವೆಯಲ್ಲಿ ಮೂರು ದಿನಗಳಿಂದ ಮುಂದುವರಿದಿರುವ ಹಿಂಸಾಚಾರದಿಂದಾಗಿ ಇಲ್ಲಿನ ಶಾಲೆಗಳೆಲ್ಲ ಮುಚ್ಚಿವೆ. ಆದರಿಂದಾಗಿ ತನಗೀಗ ಕೆಲಸವಿಲ್ಲದಾಗಿದೆ. ತನಗೆ ಕೆಲಸವೊಂದು ಬೇಕು ಎಂದು ಕಾಶ್ಮೀರದ ಶಾಲಾ ಶಿಕ್ಷಣ ನಿರ್ದೇಶಕನ ಫೇಸ್‌ಬುಕ್ ಪೋಸ್ಟ್ ನಾಗರಿಕರ ತೀಕ್ಷ್ಣ ಪ್ರತಿಕ್ರಿಯೆಗೆ ಹೇತುವಾಗಿದೆ.
ತಾನು ಮುಚ್ಚಿರುವ ಶಾಲೆಗಳ ನಿರ್ದೇಶಕನಾಗಿದ್ದೇನೆಂದು ಶಾ ಫೈಸಲ್ ಎಂಬ್ರು, ಕಾಶ್ಮೀರ ಹಿಂಸಾಚಾರದಿಂದ ಶಾಲೆಗಳು ಮುಚ್ಚಿರುವುದನ್ನುಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ.
ಕೆಲವರು ಫೈಸಲ್‌ರನ್ನು ಟೀಕಿಸಿದ್ದರೆ, ಇನ್ನು ಕೆಲವರು ಪರ್ಯಾಯ ಉದ್ಯೋಗಗಳ ಸಲಹೆ ನೀಡಿದ್ದಾರೆ. ಕೆಲವರು ಅವರನ್ನು ಪ್ರತ್ಯೇಕತಾವಾದಿಗಳ ಪಾಳಯ ಸೇರುವಂತೆ ಆಹ್ವಾನಿಸಿದ್ದಾರೆ. ಆದರೆ, ಹಲವರು ಅವರಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News