ದಾದ್ರಿ: ಊರಲ್ಲೇ ಇರದಿದ್ದ ಅಖ್ಲಾಕ್ ಸೋದರನ ಬಂಧನಕ್ಕೆ ಸ್ಥಳೀಯರ ಆಗ್ರಹ

Update: 2016-10-12 03:53 GMT

ಹೊಸದಿಲ್ಲಿ, ಅ.12: ಗೋಮಾಂಸ ಸೇವಿಸಿದ ಅನುಮಾನದಿಂದ ಹತ್ಯೆಗೀಡಾಗಿದ್ದ ದಾದ್ರಿಯ ಮುಹಮ್ಮದ್ ಅಖ್ಲಾಕ್ ಅವರ ಸಹೋದರ ಜಾನ್ ಮುಹಮ್ಮದ್  ಎಂಬವರನ್ನು ತಕ್ಷಣ ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅವರು ಕರುವನ್ನು ವಧೆ ಮಾಡಿದ್ದಾರೆ ಎನ್ನುವುದು ಸ್ಥಳೀಯರ ಆರೋಪ. ಕರುವನ್ನು ವಧೆ ಮಾಡಲಾಯಿತು ಎಂದು ಹೇಳಲಾದ ದಿನ ಅವರು ಊರಲ್ಲೇ ಇರಲಿಲ್ಲ ಎನ್ನುವುದು ವಾಸ್ತವ.
ಗೋಹತ್ಯೆ ಮಾಡಿದ ಸಂಶಯದ ಮೇಲೆ ಉದ್ರಿಕ್ತ ಗುಂಪು ಅಖ್ಲಾಕ್ ಅವರನ್ನು ಕಳೆದ ವರ್ಷದ ಸೆಪ್ಟೆಂಬರ್ 28ರಂದು ಹೊಡೆದು ಸಾಯಿಸಿತ್ತು. ಕರುವಿನ ಹತ್ಯೆ ನಡೆದಿದೆ ಎನ್ನಲಾದ ಸೆಪ್ಟೆಂಬರ್ 25ರಂದು ಅಖ್ಲಾಕ್ ಎಲ್ಲಿದ್ದರು ಎಂಬ ಮಾಹಿತಿ ಪಡೆಯುವ ಸಲುವಾಗಿ ಅವರು ಬಳಸುತ್ತಿದ್ದ ಮೊಬೈಲ್‌ನ ಟವರ್ ಮಾಹಿತಿಯನ್ನು ಪಡೆಯಲಾಗಿದೆ. ಆದರೆ ಅವರು ಈ ಘಟನೆ ನಡೆದ ಸ್ಥಳದಿಂದ ದೂರದಲ್ಲಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ಕಳೆದ ವರ್ಷದ ಈದ್ ಸಂದರ್ಭದಲ್ಲಿ ತಾವು ಗ್ರಾಮಕ್ಕೇ ಬಂದಿರಲಿಲ್ಲ ಎಂದು ಜಾನ್ ಮುಹಮ್ಮದ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News