ಬಜಾಲ್ ಪಕ್ಕಲಡ್ಕ ಮದ್ರಸದಲ್ಲಿ ಮುಅಲ್ಲಿಂ ಡೇ
Update: 2016-10-16 08:04 GMT
ಮಂಗಳೂರು, ಅ.16: ಬಜಾಲ್ ಪಕ್ಕಲಡ್ಕ ಮದ್ರಸದಲ್ಲಿ ಮುಅಲ್ಲಿಂ ಡೇ ಕಾರ್ಯಕ್ರಮ ಜಮಾಅತ್ ಖತೀಬ್ ನಝೀರ್ ಅಝ್ಹರಿ ನೇತೃತ್ವದಲ್ಲಿ ನಡೆಯಿತು.
ಸಯ್ಯಿದ್ ಈಸಕೋಯ ತಂಙಳ್ ದುಆದೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕರ್ ವಹಿಸಿದ್ದರು. ಮದ್ರಸ ಸದರ್ ಮುಅಲ್ಲಿಂ ರಫೀಕ್ ಮುಸ್ಲಿಯಾರ್ ಕಾರ್ಯಕ್ರಮ ಉಧ್ಘಾಟಿಸಿದರು.
ದೀನೀ ರಂಗದಲ್ಲಿ ಮುಅಲ್ಲಿಮರ ಪಾತ್ರ ಎಂಬ ವಿಷಯದಲಿ ನಝೀರ್ ಅಝ್ಹರಿ ಉಪನ್ಯಾಸ ನೀಡಿದರು. ಜಮಾಅತ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ, ಮದ್ರಸ ಮುಅಲ್ಲಿಂ ಅಬ್ದುರ್ರಶೀದ್ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು.
ಎಸ್ಬಿವಿ ನಾಯಕ ನಿಝಾಮುದ್ದೀನ್ ಕಿರಾಅತ್ ಪಠಿಸಿದರು. ಎಸ್ಕೆಎಸ್ಬಿವಿ ಸಂಚಾಲಕ ಯಾಕೂಬ್ ಫೈಝಿ ಸ್ವಾಗತಿಸಿದರು. ಎಸ್ಬಿವಿ ಕಾರ್ಯದರ್ಶಿ ಝಿಯಾದ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳು ಮದ್ರಸ ಪರಿಸರವನ್ನು ಸ್ವಚ್ಛಗೊಳಿಸಿದರು.