ಹಾವಿನ ಕಡಿತಕ್ಕೊಳಗಾಗಿ ಮಗು ಮೃತ್ಯು

Update: 2016-10-31 03:50 GMT

ಕಾಸರಗೋಡು, ಅ.31: ಹಾವು ಕಡಿದು ಎರಡೂವರೆ ವರ್ಷದ ಮಗು ಮೃತಪಟ್ಟ ಘಟನೆ ಕಾಞಂಗಾಡ್‌ನ ಆಡೋಟ್ ಎಂಬಲ್ಲಿ ನಡೆದಿದೆ.
ಆಡೋಟ್‌ನ ನಿಶಾಂತ್ ಎಂಬವರ ಪುತ್ರ ದೇವಾನಂದ ಮೃತಪಟ್ಟ ಮಗು. ಗುರುವಾರ ನೆರೆಮನೆಯಿಂದ ಬರುತ್ತಿದ್ದಾಗ ದೇವಾನಂದನಿಗೆ ಹಾವು ಕಡಿದಿತ್ತು. ಇದರಿಂದ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಮಗುವನ್ನು ಪರಿಯಾರಂ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಮಗು ರವಿವಾರ ಮೃತಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News