ಮೂಡುಬಿದಿರೆಯಲ್ಲಿ ಹೀಗೊಬ್ಬ ಕನ್ನಡಾಭಿಮಾನಿ

Update: 2016-11-01 13:12 GMT

ಮೂಡುಬಿದಿರೆ, ನ.1: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೋಟೆಲ್ ಮಾಲಕರೋರ್ವರು ಸಾರ್ವಜನಿಕರಿಗೆ ದಿನವಿಡೀ ಉಚಿತವಾಗಿ ಚಹಾ-ತಿಂಡಿ ನೀಡಿ ಕನ್ನಡಾಭಿಮಾನವನ್ನು ಮೆರೆದಿದ್ದಾರೆ.

ಮಿಜಾರು ಬೈತರಿ ಗೋಪಾಲಕೃಷ್ಣ ದೇವಸ್ಥಾನದ ಎದುರುಗಡೆ ಇರುವ ಕ್ಯಾಂಟೀನ್‌ನ ಮಾಲಕ ರಘುವೀರ ಮಿಜಾರು (57) ಅವರೇ ಈ ವಿಭಿನ್ನ ಕನ್ನಡಾಭಿಮಾನಿ.

ರಘುವೀರ ಅವರು ಕಳೆದ 20 ವರ್ಷಗಳಿಂದ ಮಿಜಾರು ದೇವಸ್ಥಾನದ ಬಳಿ ಕ್ಯಾಂಟೀನ್ ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯ ಕನ್ನಡ ರಾಜ್ಯೋತ್ಸವದಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತನ್ನ ಕ್ಯಾಂಟೀನ್‌ಗೆ ಆಗಮಸಿದ್ದ ಪ್ರತಿಯೋರ್ವ ಗ್ರಾಹಕನಿಗೂ ಉಚಿತವಾಗಿ ಚಾ-ತಿಂಡಿಯನ್ನು ನೀಡಿ ಕನ್ನಡ ಭಾಷೆಯ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News