ಸ್ಕೂಟರ್‌ಗೆ ಬೈಕ್ ಢಿಕ್ಕಿ: ಇಬ್ಬರಿಗೆ ಗಾಯ

Update: 2016-11-01 13:29 GMT

ಮಂಗಳೂರು, ನ.1: ನಗರದ ಕುಂಟಿಕಾನದಿಂದ ಎಯ್ಯಡಿ ಕಡೆಗೆ ಚಲಿಸುತ್ತಿದ್ದ ಸ್ಕೂಟರ್‌ಗೆ ಹರಿಪದವು ದೇವಸ್ಥಾನದ ದ್ವಾರದ ಬಳಿ ಬೈಕೊಂದು ಢಿಕ್ಕಿ ಹೊಡೆದ ಘಟನೆ ರವಿವಾರ ರಾತ್ರಿ 9 ಗಂಟೆಗೆ ನಡೆದಿದೆ.

ಈ ಅಪಘಾತದಿಂದ ಸ್ಕೂಟರ್ ಸವಾರ ಸಾಗರ್ ಮತ್ತು ಬೈಕ್ ಸವಾರ ಲೋಕೇಶ್ ಕುಮಾರ್ ಸಿಂಗ್‌ಗೆ ಗಾಯವಾಗಿದೆ. ಗಂಭೀರ ಗಾಯಗೊಂಡ ಸಾಗರ್‌ನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸಾಗರ್ ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್‌ಗೆ ಬೈಕ್ ಢಿಕ್ಕಿ ಹೊಡೆಯಿತು. ಇದರಿಂದ ಸ್ಕೂಟರ್ ಸವಾರ ಸಾಗರ್ ಕಾಂಕ್ರೀಟ್ ರಸ್ತೆಗೆ ಬಿದ್ದು ಗಾಯಗೊಂಡರು.

ಈ ಬಗ್ಗೆ ಸಾಗರ್‌ನ ತಾಯಿ ಅನಸೂಯಾ ನೀಡಿದ ದೂರಿನಂತೆ ಮಂಗಳೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News