ಧರ್ಮನಿಂದೆ ವಿರುದ್ಧ ವ್ಯಾಪಕ ಪ್ರತಿಭಟನೆ: ಇಂಡೊನೇಷಿಯಾದ ಅಧ್ಯಕ್ಷರ ವಿದೇಶ ಪ್ರವಾಸ ರದ್ದು

Update: 2016-11-06 06:45 GMT

ಜಕಾರ್ತ, ನವೆಂಬರ್ 6: ದೇವ ನಿಂದೆ ಮಾಡಿದ ಜಕಾರ್ತದ ಗವರ್ನರ್‌ರನ್ನು ಬಂಧಿಸಬೇಕೆಂದು ಆಗ್ರಹಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಇಂಡೊನೇಷಿಯನ್ ಅಧ್ಯಕ್ಷ ಜೊಕೊವಿದೊದ ಆಸ್ಟ್ರೇಲಿಯಕ್ಕೆ ನೀಡಬೇಕಾದ ಭೇಟಿಯನ್ನು ರದ್ದು ಪಡಿಸಿದ್ದಾರೆಂದು ವರದಿಯಾಗಿದೆ.

ಇಂಡಿನೇಷಿಯಾದ ರಾಜಧಾನಿ ಜಕಾರ್ತದಲ್ಲಿ ನಡೆದ ಬೃಹತ್ ಪ್ರತಿಭಟನಾ ಜಾಥಾದ ವಿರುದ್ಧ ಪೊಲೀಸರು ಅಶ್ರುವಾಯು ಸಿಡಿಸಿದ್ದು, ಓರ್ವ ವ್ಯಕ್ತಿ ಮೃತನಾಗಿ ಹನ್ನೆರೆಡು ಮಂದಿ ಗಾಯಗೊಂಡಿದ್ದಾರೆ. ವಿದೇಶ ಪ್ರವಾಸವನ್ನು ಅಧ್ಯಕ್ಷರು ರದ್ದುಪಡಿಸಿದ್ದಾರೆಂದು ವಿದೇಶ ಸಚಿವಾಲಯ ತಿಳಿಸಿದೆ. ಗವರ್ನರ್‌ರನ್ನು ಬಂಧಿಸಬೇಕೆಂಬ ಬೇಡಿಕೆಯಿಂದ ಹಿಂದೆಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News