ಬಿ.ಸಿ.ರೋಡ್‌ಗೆ ಆಗಮಿಸಿದ ತುಳುವ ತೇರ್

Update: 2016-11-07 16:30 GMT

ಬಂಟ್ವಾಳ, ನ.7: ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಡಿ.9ರಿಂದ 13ರವೆರೆಗೆ ನಡೆಯಲಿರುವ ’ವಿಶ್ವ ತುಳುವರೆ ಆಯೊನೊ 2016’ರ ಪ್ರಚಾರಾರ್ಥವಾಗಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ’ತುಳುವತೇರ್’ ಸೋಮವಾರ ಬಿ.ಸಿ.ರೋಡ್‌ಗೆ ಆಗಮಿಸಿತು.

ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮೆರವಣಿಗೆಯನ್ನು ಬರಮಾಡಿಕೊಂಡರು. ಬಳಿಕ ಹೆದ್ದಾರಿಯಲ್ಲಿ ಸಾಗಿದ ತುಳುವ ತೇರ್‌ನ ಮೆರವಣಿಗೆ ಬಿ.ಸಿ.ರೋಡು ರಂಗಮಂದಿರದವರೆಗೆ ಸಾಗಿಬಂತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಮಾತನಾಡಿದರು.

ಬಂಟ್ವಾಳ ತುಳು ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಸಭಾಧ್ಯಕ್ಷತೆ ವಹಿಸಿದ್ದರು. ವಿಶ್ವ ತುಳುವೆರೆ ಆಯೊನೊದ ಸಂಚಾಲಕ ಬಾಸ್ಕರ್ ಪೂಜಾರಿ ಕುಂಬ್ಳೆ ಪ್ರಸ್ತಾವಿಕವಾಗಿ ಮಾತನಾಡಿದರು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮಂಗಳೂರು ತುಳು ಆಯೊನೊದ ಸಮಿತಿ ಪ್ರಮುಖರಾದ ರಾಜ್‌ಗೋಪಾಲ್, ಪುರಸಭಾ ಸದಸ್ಯ ಸದಾಶಿವ ಬಂಗೇರ, ತುಳು ಆಯೊನೊದ ಪದಾಧಿಕಾರಿ ಶ್ರೀನಾಥ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿದರು. ತುಳು ಅಕಾಡಮಿ ಸದಸ್ಯ ಡಿ.ಎಂ.ಕುಲಾಲ್ ವಂದಿಸಿದರು. ಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News