ಮುಝಫ್ಫರ್ನಗರ ದಂಗೆ : ಕಾರು ಸುಟ್ಟ ಪ್ರಕರಣ ಸತ್ರ ನ್ಯಾಯಲಯಕ್ಕೆ
Update: 2016-11-08 14:55 GMT
ಮುಝಫ್ಫರ್ನಗರ, ನ.8: ಸ್ಥಳೀಯ ನ್ಯಾಯಾಲಯವೊಂದು 2013ರ ಮುಝಫ್ಫರ್ನಗರ ದಂಗೆಗೆ ಸಂಬಂಧಿಸಿದ ಪ್ರಕರಣವೊಂದನ್ನು ಇಂದು ಸತ್ರ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಕಾರೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣ ಇದಾಗಿದ್ದು, ಸ್ಥಳೀಯ ಬಿಜೆಪಿ ನಾಯಕ ವೀರೇಂದರ್ ಸಿಂಗ್ ಸಹಿತ 9 ಮಂದಿಯ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿದೆ.
ವಿಶೇಷ ತನಿಖೆ ತಂಡವು ವೀರೇಂದರ್ ಸಿಂಗ್, ಸೊಸೈಟಿಯ ಅಧ್ಯಕ್ಷ ಶ್ಯಾಂಪಾಲ್, ಜೈಪ್ರಕಾಶ್ ಶಾಸ್ತ್ರಿ, ಓಂವೀರ್ ಹಾಗೂ ಇತರರ ವಿರುದ್ಧ ಐಪಿಸಿಯ ಸೂಕ್ತ ಪರಿಚ್ಛೇದಗಳನ್ವಯ ದಂಗೆ ಹಾಗೂ ಕೊಲೆಯತ್ನ ಆರೋಪದಲ್ಲಿ ಆರೋಪ ಪಟ್ಟಿ ದಾಖಲಿಸಿತ್ತು.
ಜಿಲ್ಲೆಯ ನಂಗ್ಲಾಮದೋರೆಯಲ್ಲಿ ನಡೆದ ಮಹಾಪಂಚಾಯತ್ನ ಠರಾವಿನಂತೆ 2013ರ ಆ.31ರಂದು ಆರೋಪಿಗಳು ಭಿನ್ನ ಸಮುದಾಯದ ವ್ಯಕ್ತಿಯೊಬ್ಬನಿಗೆ ಸೇರಿದ್ದ ಕಾರೊಂದಕ್ಕೆ ಬೆಂಕಿ ಹಚ್ಚಿದ್ದರೆಂದು ಪ್ರಕರಣ ದಾಖಲಿಸಲಾಗಿತ್ತು.ಆದಾಗ್ಯೂ, ಕಾರಿನೊಳಗಿದ್ದವರನ್ನು ಪೊಲೀಸರು ರಕ್ಷಿಸಿದ್ದರು.