ಶಬರಿಮಲೆ ಇನ್ನು ಶ್ರೀ ಅಯ್ಯಪ್ಪಸ್ವಾಮಿ ಕ್ಷೇತ್ರಂ

Update: 2016-11-21 10:00 GMT

ಶಬರಿಮಲೆ, ನ. 21: ಶಬರಿಮಲೆ ಧರ್ಮಶಾಸ್ತ ಕ್ಷೇತ್ರಂ ಎಂಬ ಹೆಸರನ್ನು ದೇವಸ್ವಂ ಬೋರ್ಡ್ ಬದಲಾಯಿಸಿದೆ. ಇನ್ನು ಶಬರಿ ಮಲೆ ದೇವಳ, ಶ್ರೀ ಅಯ್ಯಪ್ಪಸ್ವಾಮಿ ಕ್ಷೇತ್ರಂ ಎಂಬ ಹೆಸರಿನಲ್ಲಿ ಕರೆಯಲ್ಪಡಲಿದೆ ಎಂದು ದೇವಸ್ವಂ ಬೋರ್ಡ್ ಆದೇಶ ಹೊರಡಿಸಿದೆ. ಇದಕ್ಕೆ ಪೂರಕವಾಗಿ ಒಂದು ಐತಿಹಾಸಿಕ ಘಟನೆಯನ್ನು ಕೂಡಾ ಸೂಚಿಸಿಲಾಗಿದೆ ಎಂದು ವರದಿಯಾಗಿದೆ.

ಶತಮಾನಗಳ ಹಿಂದೆ ಅಯ್ಯಪ್ಪಸ್ವಾಮಿ ತನ್ನ ದೌತ್ಯಗಳನ್ನು ಪೂರ್ತಿಗೊಳಿಸಿದ ಬಳಿಕ ಶಬರಿ ಮಲೆಯಲ್ಲಿ ಹೋಗಿ ಧರ್ಮಶಾಸ್ತದಲ್ಲಿ ವಿಲಯನವಾದರು. ಹೀಗೆ ಶಬರಿ ಮಲೆ ಧರ್ಮಶಾಸ್ತ ಕ್ಷೇತ್ರಂ ಅಯ್ಯಪ್ಪಸ್ವಾಮಿ ಕ್ಷೇತ್ರವಾಗಿ ಪರಿವರ್ತನೆಯಾಯಿತು ಎಂದು ಆದೇಶ ಪತ್ರದಲ್ಲಿ ವಿವರಿಸಲಾಗಿದೆ.

ದೇವಸ್ವಂ ಬೋರ್ಡ್‌ಗೆ ಧಾರಾಳ ಧರ್ಮಶಾಸ್ತ ಕ್ಷೇತ್ರಗಳಿವೆ ಆದರೆ ಅಯ್ಯಪ್ಪಸ್ವಾಮಿ ಕ್ಷೇತ್ರ ಶಬರಿ ಮಲೆಯಲ್ಲಿ ಮಾತ್ರ ಇದೆ ಎಂದು ದೇವಸ್ವಂ ಕಾರ್ಯದರ್ಶಿ ಸಹಿಹಾಕಿ ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ. ಈ ಆದೇಶವನ್ನು ದೇವಸ್ವಂ ಬೋರ್ಡ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News