ಕೊಟ್ಟಾರ ಇನ್ಫೋಸಿಸಿ ಕಚೇರಿ ಎದುರು ಕಾರಿನ ಮೇಲೆ ಉರುಳಿಬಿದ್ದ ಬೃಹತ್ ಮರ

Update: 2016-11-26 05:58 GMT

ಮಂಗಳೂರು, ನ.26: ಬೃಹತ್ ಮರವೊಂದು ಮುರಿದು ಕಾರಿನ ಮೇಲೆ ಬಿದ್ದ ಘಟನೆ ಕೊಟ್ಟಾರ ಸಮೀಪದ ಅಶೋಕ ನಗರದಲ್ಲಿಂದು ನಡೆದಿದೆ.
ಇಲ್ಲಿನ ಇನ್ಫೋಸಿಸ್ ಕಚೇರಿ ಎದುರಿನ ರಸ್ತೆ ಮಧ್ಯೆಯಿರುವ ಕಟ್ಟೆಯಲ್ಲಿರುವ ಅಶ್ವತ್ಥ ಮರ ಇಂದು ಬೆಳಗ್ಗೆ ಉರುಳಿಬಿದ್ದಿದೆ. ಈ ವೇಳೆ ಸಂಚರಿಸುತ್ತಿದ್ದ ಕಾರೊಂದು ಅದರಡಿಯಲ್ಲಿ ಸಿಲುಕಿಕೊಂಡಿದೆ. ಇದರಿಂದ ಕಾರಿಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News