ಬೆಂಕಿ ಆಕಸ್ಮಿಕಕ್ಕೆ ಒಣಹುಲ್ಲು ಭಸ್ಮ: ರೈತರಿಗೆ ಸಾವಿರಾರು ರೂ. ನಷ್ಟ

Update: 2016-11-26 10:33 GMT

ಮುಂಡಗೋಡ, ನ.26: ತಾಲೂಕಿನ ನಾಗನೂರ ಪಂಚಾಯತ್ ವ್ಯಾಪ್ತಿಯ ಹನಮಾಪೂರ ಗ್ರಾಮದಲ್ಲಿ ಒಣಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ನಷ್ಟ ಉಂಟಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
  ಶೇಕಪ್ಪಪೂಜಾರ, ಬಂಗಾರಪ್ಪ ಬಸಾಪೂರ ಮತ್ತು ಶಂಕರಪ್ಪಾ ಬಸಾಪೂರ ಎಂಬ ರೈತರಿಗೆ ಸೇರಿದ ಹುಲ್ಲಿಗೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಶೇಖರಿಸಿಟ್ಟಿದ್ದ ಹುಲ್ಲಿಗೆ ವ್ಯಾಪಿಸಿದೆ ಎಂದು ಹೇಳಲಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳವು ಬಿ.ಬಿ.ಜಾಡರ ನೇತೃತ್ವದಲ್ಲಿ ಸಿಬ್ಬಂದಿ ವರ್ಗದವರು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
 ಘಟನೆಯಲ್ಲಿ ಸುಮಾರು 70 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News