ಬಂಟ್ವಾಳ: ಚಿನ್ನದ ಸರ ಕಳವು

Update: 2016-11-26 14:18 GMT

ಬಂಟ್ವಾಳ, ನ. 26: ಪಾದಾಚಾರಿ ಗೃಹಿಣಿಯೋರ್ವರ ಚಿನ್ನದ ಕರಿಮಣಿ ಸರವನ್ನು ಅಪರಿಚಿತನೋರ್ವ ಕಿತ್ತೊಯ್ದ ಘಟನೆ ಶುಕ್ರವಾರ ಉಳಿ ಗ್ರಾಮದ ಉಳಿಬೈಲಿನಲ್ಲಿ ಸಂಭವಿಸಿದೆ.

ಇಲ್ಲಿನ ಉಗ್ಗಪ್ಪ ಪೂಜಾರಿ ಎಂಬವರ ಪತ್ನಿ ಶಾರದ ಎಂಬವರು ಕರಿಮಣಿ ಸರ ಕಳಕೊಂಡವರು. ಅವರು ತಮ್ಮ ಮಗುವನ್ನು ಶಾಲೆಗೆ ಬಿಟ್ಟು ವಾಪಾಸು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಬೈಕ್‌ನಲ್ಲಿ ಬಂದ ಅಪರಿಚಿತ ದಾರಿ ಕೇಳುವ ನೆಪದಲ್ಲಿ ಶಾರದರ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಕಿತ್ತು ಪರಾರಿಯಾಗಿದ್ದಾನೆ. ತಕ್ಷಣ ಶಾರದ ಅವರು ಬೊಬ್ಬೆ ಹೊಡೆದಾಗ ಸ್ಥಳೀಯರು ಸೇರಿ ಬೈಕ್‌ನ್ನು ಹಿಂಬಾಲಿಸಿದರೂ ಕಳ್ಳನ ಪತ್ತೆಯಾಗಲಿಲ್ಲ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ. ಕಳಕೊಂಡ ಚಿನ್ನದ ಸರದ ಮೊತ್ತ ಸುಮಾರು 80 ಸಾವಿರ ರೂ.ಗಳೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News