ವಿದ್ಯುತ್ ಆಘಾತದಿಂದ ಮೃತ್ಯು

Update: 2016-12-02 16:42 GMT

ಕಾರ್ಕಳ, ಡಿ.2: ಅಡಿಕೆ ಮರದಿಂದ ಅಡಿಕೆ ಕೊಯ್ಯುತ್ತಿರುವಾಗ ಪಕ್ಕದಲ್ಲೇ ಹಾದುಹೋದ ವಿದ್ಯುತ್ ಹೈಟೆನ್ಶನ್ ವೈರ್ ತಾಗಿ ವಿದ್ಯುತ್ ಆಘಾತದಿಂದ ತೀವ್ರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಡಿ.1ರ ಸಂಜೆ 7:20ಕ್ಕೆ ಮೃತಪಟ್ಟಿದ್ದಾರೆ.

ಮೃತರನ್ನು ಬೆಳ್ತಂಗಡಿ ಗ್ರಾಮ ಕುವೆಟ್ಟುನ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಇವರು ನ.25ರಂದು ಕಾರ್ಕಳ ತಾಲೂಕು ಸೂಡಾ ಗ್ರಾಮದ ರಿತೇಶ್ ಶೆಟ್ಟಿ ಎಂಬವರ ಮನೆಗೆ ಕೂಲಿಕೆಲಸಕ್ಕೆ ಹೋಗಿದ್ದಾಗ ಅಡಿಕೆ ಕೊಯ್ಯಲು ಮರ ಏರಿದ್ದಾಗ ಈ ಘಟನೆ ನಡೆದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News