ರಣಜಿ ಟ್ರೋಫಿ: ಕೇರಳಕ್ಕೆ ಜಯತಂದು ಕೊಟ್ಟ ಕಾಸರಗೋಡಿನ ಅಝರುದ್ದೀನ್

Update: 2016-12-03 09:16 GMT

ಕಟಕ್, ಡಿಸೆಂಬರ್ 3: ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿತ್ರಿಪುರದ ವಿರುದ್ಧ ಕೇರಳ ಏಳುವಿಕೆಟ್‌ಗಳ ಜಯಸಂಪಾದಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 40ರನ್ ಮತ್ತುಎರಡನೆ ಇನಿಂಗ್ಸ್‌ನಲ್ಲಿ 99 ರನ್ ತೆಗೆದ ಕಾಸರಕೋಡಿನ ಅಝರುದ್ದೀನ್ ಕೇರಳಕ್ಕೆ ಅನಾಯಾಸ ಗೆಲುವು ತಂದುಕೊಟ್ಟಿದ್ದಾರೆ ಎಂದು ವರದಿಯಾಗಿದೆ.

 ಒಂದನೆ ಇನ್ನಿಂಗ್ಸ್‌ನಲ್ಲಿ ತ್ರಿಪುರ 213ರನ್ ಗಳಿಸಿತ್ತು. ಕೇರಳ 193 ರನ್ ಗಳಿಸಿತ್ತು. ಎರಡನೆ ಇನಿಂಗ್ಸ್‌ನಲ್ಲಿ ತ್ರಿಪುರ 162 ರನ್ ಗಳಿಸಿತ್ತು. ಕೇರಳಕ್ಕೆ 193 ರನ್‌ಗಳ ವಿಜಯದ ಗುರಿ ನಿಗದಿಯಾಗಿತ್ತು. ಅಝರುದ್ದೀನ್‌ರ ಬ್ಯಾಟಿಂಗ್ ಎದುರು ತ್ರಿಪುರಕ್ಕೆ ಗೆಲುವು ಒಲಿಯಲಿಲ್ಲ. ಅಝರುದ್ದೀನ್ ಎರಡು ಇನ್ನಿಂಗ್ಸ್‌ನಲ್ಲಿಯೂ ಕೇರಳಕ್ಕೆ ಉತ್ತಮ ಸ್ಕೋರ್ ದಾಖಲಿಸಿದರು.

 ಎರಡನೆ ಇನ್ನಿಂಗ್ಸ್ನಲ್ಲಿ ಕೇರಳಕ್ಕಾಗಿ ಭವಿನ್ ಜೆ ತಕ್ಕರ್ 47ರನ್ಸ್ ಗಳಿಸಿದರು. 125 ಎಸೆತಗಳಲ್ಲಿ ಅಝರುದ್ದೀನ್ 99ರನ್ ಗಳಿಸಿದ್ದಾರೆ. ಎರಡು ಇನ್ನಿಂಗ್ಸ್‌ಗಳಲ್ಲಿ 22 ಬೌಂಡರಿಯನ್ನು ಅವರು ಹೊಡೆದಿದ್ದಾರೆ.ಇತ್ತೀಚೆಗೆ ಅಝರುದ್ದೀನ್ ನೀಡಿದ್ದ ಉತ್ತಮ ಪ್ರದರ್ಶನ ಅವರಿಗೆ ರಣಜಿ ಟ್ರೋಪಿಗೆ ಬಾಗಿಲು ತೆರೆದು ಕೊಟ್ಟಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News