ಗೇರು ಸಂಶೋಧನಾ ನಿರ್ದೇಶನಾಲಯಕ್ಕೆ ಐಸಿಎಆರ್ ಮಹಾನಿರ್ದೇಶಕ ಭೇಟಿ

Update: 2016-12-11 18:39 GMT

ಪುತ್ತೂರು, ಡಿ.11: ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕದಲಿರುವ ಗೇರು ಸಂಶೋಧನಾ ನಿರ್ದೇಶನಾಲಯಕ್ಕೆ ದಿಲ್ಲಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಪರಿಷತ್(ಐಸಿಎಆರ್)ನ ಮಹಾ ನಿರ್ದೇಶಕ ಹಾಗೂ ಕೇಂದ್ರ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ.ತ್ರಿಲೋಚನ್ ಮಹೋಪಾತ್ರ ರವಿವಾರ ಭೇಟಿ ನೀಡಿದರು.

ನಿರ್ದೇಶನಾಲಯದ ಪರಿಶೀಲನೆ ನಡೆಸಿದ ಅವರು ಸಂಶೋಧನಾ ಸಲಹೆ ಸೂಚನೆ ನೀಡಿದರು.

ತಂತ್ರಜ್ಞಾನ ತಲುಪಿಸುವಲ್ಲಿ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳ ಸಹಯೋಗ ಅಗತ್ಯ ಎಂದ ಡಾ.ತ್ರಿಲೋಚನ್, ಈ ನಿಟ್ಟಿನಲ್ಲಿ ಗೇರು ಸಂಶೋಧನಾ ಕೇಂದ್ರ ಕೋಯ್ಲೋತ್ತರ ಸಂಸ್ಕರಣೆ ಮತ್ತು ನರ್ಸರಿ ತಂತ್ರಜ್ಞಾನವನ್ನು ಲೈಸನ್ಸ್ ಮಾಡುವುದರ ಮೂಲಕ ಯುವ ಶಕ್ತಿಯನ್ನು ಉದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಕೇಂದ್ರ ಸರಕಾರದ ಇಂಗಿತದಂತೆ ‘ನಗದುರಹಿತ ವ್ಯವಹಾರ’ವನ್ನು ಸಂಸ್ಥೆಯ ಎಲ್ಲ ಹಣಕಾಸು ವ್ಯವಹಾರ ದಲ್ಲಿ ಅಳವಡಿಸಿಕೊಳ್ಳುವಂತೆ ಅವರು ಸೂಚನೆ ನೀಡಿದರು.

ಈ ಸಂದರ್ಭ ಭಾರತೀಯ ಕೃಸಂಶೋಧನಾ ಪರಿಷತ್‌ನ ತೋಟಗಾ ರಿಕಾ ವಿಭಾಗದ ಸಹಾಯಕ ನಿದೇರ್ಶಕ ಡಾ.ಜಾನಕಿ ರಾವ್, ವಿಜ್ಞಾನಿಗಳಾದ ಡಾ.ರವಿಪ್ರಸಾದ್ ಮತ್ತು ಡಾ. ಮೋಹನ್ ಉಪಸ್ಥಿತರಿದ್ದರು.

ಗೇರು ಸಂಶೋಧನಾ ನಿರ್ದೇಶನಾ ಲಯದ ಪ್ರಭಾರ ನಿರ್ದೇಶಕ ಡಾ.ಎಂ.ಜಿ.ನಾಯಕ್ ಸ್ವಾಗತಿಸಿದರು. ಕೋಯ್ಲೋತ್ತ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಬಾಲ ಸುಬ್ರಮಣಿ ಎನ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News