ಬಂಟ್ವಾಳ : ಪ್ರವಾದಿ ಜನ್ಮದಿನಾಚರಣೆ ಪ್ರಯುಕ್ತ ರ್ಯಾಲಿ
Update: 2016-12-12 13:57 GMT
ಬಂಟ್ವಾಳ, ಡಿ. 12 : ಬಂಟ್ವಾಳ ಕೆಳಗಿನಪೇಟೆ ಮೀಲಾದ್ ಸಮಿತಿಯಿಂದ ಸೋಮವಾರ ಪ್ರವಾದಿ ಜನ್ಮದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಕೆಳಗಿನಪೇಟೆ ಮಸೀದಿಯಿಂದ, ಗೂಡಿನಬಳಿ, ಬಿ.ಸಿ.ರೋಡ್ ವೃತ್ತದ ಮೂಲಕ ಕೆಳಗಿನಪೇಟೆಯವರೆಗೆ ಮದರಸ ವಿದ್ಯಾರ್ಥಿಗಳು ಹಾಗೂ ಊರಿನ ನಾಗರಿಕರಿಂದ ಆಕರ್ಷಕ ಮೀಲಾದ್ ರ್ಯಾಲಿ ನಡೆಯಿತು.
ರ್ಯಾಲಿಯಲ್ಲಿ ಪುಟಾಣಿಗಳ ಸಾಂಸ್ಕೃತಿ ಕಾರ್ಯಕ್ರಮ ಜನಮನ ಸೆಳೆಯಿತು. ರ್ಯಾಲಿ ಬಳಿಕ ಸ್ಥಳೀಯ ಆಸ್ಪತ್ರೆಯ ರೋಗಿಗಳಿಗೆ, ಸರ್ವಧರ್ಮಿಯರಿಗೆ ಹಾಗೂ ಪ್ರಯಾಣಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಕೆಳಗಿನ ಪೇಟೆ ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯೀಲ್ ಅರಬಿ, ಖತೀಬರಾದ ಅನ್ಸಾರ್ಫೈಝಿ, ಸದರ್ ಉಸ್ತಾದ್ ಹನೀಫ್ ಫೈಝಿ, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಇಕ್ಬಾಲ್ ಉಪಸ್ಥಿತರಿದ್ದರು.