ಭದ್ರಗಿರಿ: ಮೀಲಾದುನ್ನಬಿ ಸ್ವಲಾತ್ ವಾರ್ಷಿಕೋತ್ಸವ

Update: 2016-12-15 17:52 GMT

ಬ್ರಹ್ಮಾವರ, ಡಿ.15: ಭದ್ರಗಿರಿ ಬದ್ರಿಯಾ ಜುಮಾ ಮಸೀದಿ ಹಾಗೂ ಅಲ್ ಅಮೀನ್ ಯಂಗ್‌ಮೆನ್ಸ್ ಮತ್ತು ಎಸ್‌ಎಸ್‌ಎಫ್ ಘಟಕದ ವತಿ ಯಿಂದ ಈದ್ ಮೀಲಾದುನ್ನಬಿ ಹಾಗೂ ಆರನೆ ಸ್ವಲಾತ್ ವಾರ್ಷಿಕ ಕಾರ್ಯಕ್ರಮ ಮಸೀದಿ ವಠಾರದಲ್ಲಿ ಜರಗಿತು.

ಅಧ್ಯಕ್ಷತೆಯನ್ನ ಜಮಾತಿನ ಅಧ್ಯಕ್ಷ ಬಿ.ಮೊದಿನ್ ಬ್ಯಾರಿ ವಹಿಸಿದ್ದರು. ಮದ್ರಸ ಮಕ್ಕಳ ಕಾರ್ಯಕ್ರಮವನ್ನು ಖತೀಬ್ ಅಬ್ದುರ್ರಹ್ಮಾನ್ ಸಅದಿ ಉದ್ಘಾ ಟಿಸಿದರು. ಸ್ವಲಾತ್ ನೇತೃತ್ವವನ್ನು ಅಸ್ಲಯ್ಯದ್ ಹಾರೂನ್ ತಂಙಳ್ ಭದ್ರಾ ವತಿ ವಹಿಸಿಕೊಂಡಿದ್ದರು.

ನೇಜಾರು ಮಸೀದಿ ಖತೀಬ್ ಉಸ್ಮಾನ್ ಮದನಿ, ರಂಗನಕೆರೆ ಮಸೀದಿ ಖತೀಬ್ ಮುಹಮ್ಮದಾಲಿ ಸಅದಿ ಮಾತನಾಡಿದರು.

ಜಮಾತಿನ ಗೌರವಾ ಧ್ಯಕ್ಷ ಮೊದಿನ್ ಬ್ಯಾರಿ, ಉಪಾಧ್ಯಕ್ಷ ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಅನ್ವರ್ ಬಾಷಾ, ಯಂಗ್‌ಮೆನ್ಸ್ ಗೌರವಾಧ್ಯಕ್ಷ ರಫೀಕ್, ಎಸ್‌ಎಸ್‌ಎಫ್ ಗೌರವಾಧ್ಯಕ್ಷ ಇಲ್ಯಾಸ್, ಸಂಯುಕ್ತ ಜಮಾಅತಿನ ಉಡುಪಿ ತಾಲೂಕು ಅಧ್ಯಕ್ಷ ಅಬೂಬಕ್ಕರ್ ನೇಜಾರು, ಉಪಾಧ್ಯಕ್ಷ ಹಬೀದ್ ಅಲಿ, ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಉಪಸ್ಥಿತರಿದ್ದರು.


ಯಂಗ್‌ಮೆನ್ಸ್ ಕಾರ್ಯದರ್ಶಿ ರಾಹಿಲ್ ಸ್ವಾಗತಿಸಿದರು. ಕಾರ್ಯದರ್ಶಿ ನಾಸೀರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News